News Kannada
Friday, September 22 2023
ಕರಾವಳಿ

ನಕಲಿ ನೋಟು ಪ್ರಕರಣ: ಆರೋಪಿಯ ಬಂಧನ

Photo Credit :

ನಕಲಿ ನೋಟು ಪ್ರಕರಣ: ಆರೋಪಿಯ ಬಂಧನ

ಕಾಸರಗೋಡು: ನಕಲಿ ನೋಟು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಅಪರಾಧ ಪತ್ತೆದಳದ ಸಿಬಂದಿಗಳು ಬಂಧಿಸಿದ್ದಾರೆ.

Shareef kasaragoduಬಂಧಿತನನ್ನು  ಸುರತ್ಕಲ್ ಕೃಷ್ಣಾಪುರದ ಎಂ.ಶರೀಫ್ (48) ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಈತ ತಲೆಮರೆಸಿಕೊಂಡಿದ್ದನು. 2002ರಲ್ಲಿ  ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ನೋಟು  ವಶಪಡಿಸಿಕೊಂಡ ಆರೋಪದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ. ಬಂಧಿತನಾಗಿದ್ದ ಈತ 2008ರ ಬಳಿಕ ತಲೆಮರೆಸಿಕೊಂಡಿದ್ದನು. ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದನು.

ಈತನಿಗಾಗಿ ಪೊಲೀಸರು ಕಳೆದ ಹಲವು ವರ್ಷಗಳಿಂದ ಶೋಧ ನಡೆಸುತ್ತಾ ಬರುತ್ತಿದ್ದರು. ಆದರೆ ಈತ ತಲೆ ಮರೆಸಿಕೊಂಡಿದ್ದನು.  ಶರೀಫ್, ಆರೋನ್, ಮುನೀರ್ ಎಂಬ ಹೆಸರಿನಿಂದ ಕರ್ನಾಟಕದ ಹಲವೆಡೆ ಈತ ತಲೆಮರೆಸಿಕೊಂಡಿದ್ದನು. ಮೊಬೈಲ್ ಸಿಮ್ ಗಳನ್ನು ಆಗಾಗ ಬದಲಾಯಿಸುತ್ತಿದ್ದನು. ಈ ನಡುವೆ ಲಭಿಸಿದ ಖಚಿತ ಮಾಹಿತಿಯಂತೆ ವಾಮಂಜೂರು ನಿಂದ ಅಪರಾಧ ಪತ್ತೆ ದಳದ ಸಿಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾದರು. ಪೊಲೀಸರನ್ನು ಕಂಡು ಪರಾರಿಯಾಗಲೆತ್ನಿಸಿದ ಈತನನ್ನು ಬೆನ್ನಟ್ಟಿ ಬಂಧಿಸಲಾಯಿತು.

See also   ಹಣಕಾಸು ಯೋಜನೆಯಿಂದ ಭವಿಷ್ಯದ ಅಪಾಯ ದೂರ: ಬಾಲಾಜಿ ರಾವ್  
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು