News Kannada
Monday, September 25 2023
ಕರಾವಳಿ

ವಿವಿಧ ಕ್ಷೇತ್ರಗಳ 18 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Photo Credit :

ವಿವಿಧ ಕ್ಷೇತ್ರಗಳ 18 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸುಮಾರು 18 ಮಂದಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ನವಂಬರ್ 1ರಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿತರಣೆಯು ನಡೆಯಲಿದೆ. ಜಿಲ್ಲಾಡಳಿತವು ಇದಕ್ಕೆ ಕುಮಾರ್ ಪೆರಾಜೆ(ಕೃಷಿ), ಶೇಖರ್ ಭಂಡಾರಿ(ಸಾಹಿತ್ಯ), ಬೊಂಡಾಲ ಸಚ್ಚಿದಾನಂದ ಶೆಟ್ಟಿ(ಶಿಕ್ಷಣ), ಪಿ.ಎಂ. ಹಸನಬ್ಬ ಮೂಡುಬಿದಿರಿಎ(ಸಂಗೀತ), ದಿನಾಕರ್ ಇಂದಾಜೆ(ಪತ್ರಿಕೋದ್ಯಮ), ಲಕ್ಷ್ಮಣ್ ಕುಂದರ್(ಪತ್ರಿಕೋದ್ಯಮ), ವಿದ್ವಾನ್ ಶ್ರಾವನ್ ಉಳ್ಳಾಲ್(ನೃತ್ಯ), ನಾಗೇಶ್ ಎ.(ಕ್ರೀಡೆ), ಮೊಹಮ್ಮ ಶಮಿ ಅರ್ಶದ್(ಕ್ರೀಡಾ), ಜಾನ್ ಚಂದ್ರನ್(ಕಲೆ), ಸದಾಶಿವ ಅಮೀನ್(ಚಿತ್ರಕಲೆ), ಚಂದ್ರಶೇಖರ್ ನಾನಿಲ್(ಸಮಾಜಸೇವೆ), ಡಾ. ಐ. ಶಶಿಕಾಂತ್ ಜೈನ್(ಸಮಾಜಸೇವೆ), ಶಂಕರ್ ಬಿ ಶೆಟ್ಟಿ ವಿರಾರ್(ಸಮಾಜ ಸೇವೆ), ಕುರ್ನಾಡ್ ಶಿವಣ್ಣ ಆಚಾರ್ಯ(ಜಾನಪದ), ಗೋಪಾಲ್ ಶಿಬರೂರ್(ಜಾನಪದ), ಡಾ. ದಿನೇಶ್ ಕದಂ(ವೈದ್ಯಕೀಯ) ಮತ್ತು ಡಾ. ಮನೋರಮಾ ರಾವ್(ವೈದ್ಯಕೀಯ).

ಸುಳ್ಯ ಅರಂತೋಡುನ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕಂಕನಾಡಿ ಗರೋಡಿಯ ಬಿಲ್ಲವ ಸೇವಾ ಸಮಾಜ, ಸುಲ್ತಾನ್ ಬತ್ತೇರಿಯ ಮಾತಾ ಅಮೃತಾನಂದಮಯಿ ಸೇವಾ ಸಮಿತಿ, ಕದ್ರಿಯ ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್, ತಣ್ಣೀರು ಬಾವಿ ಸ್ವಿಮ್ಮಿಂಗ್ ಎಕ್ಸ್ ಪರ್ಟ್, ಪಿಸಿಎಓಎಂ ಬಿಎಫ್ ಮತ್ತು ಪಳ್ನೀರ್ ನ ಮದರ್ ಥೆರೆಸಾ ಹೋಮ್ ಆಫ್ ಡೈಯಿಂಗ್ ಡೆಸ್ಟಿಟ್ಯೂಟ್ ಹೀಗೆ ಏಳು ಸಂಘಸಂಸ್ಥೆಗಳು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿವೆ.

ಗುರುವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ.

See also  ರೈಲು ಡಿಕ್ಕಿ: ವ್ಯಕ್ತಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು