ಮಂಗಳೂರು: ಇಂದಿರಾ ಕ್ಯಾಂಟೀನ್ ಹೆಸರಲ್ಲಿ ಭಾರಿ ಲೂಟಿ ಮಾಡಲಾಗುತ್ತಿದೆ ಎಂಬ ಬಿಜೆಪಿ ಶಾಸಕ ಎಸ್ ಎ ರಾಮ್ ದಾಸ್ ಅವರ ಆರೋಪ ರಾಜಕೀಯ ಪ್ರೇರಿತ ಎಂದು ಸಚಿವ ಯು.ಟಿ,ಖಾದರ್ ತಿರುಗೇಟು ನೀಡಿದ್ದಾರೆ.
ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ. ಶಾಸಕರಾಗಿ ಆಯ್ಕೆಯಾದ ರಾಮ್ ದಾಸ್ ಅವರು ಬೇಜವಾಬ್ದಾರಿಯುತವಾದ ಹೇಳಿಕೆಯನ್ನು ನೀಡಿದ್ದಾರೆ ಎಂದರು.
ಇಂದಿರಾ ಕ್ಯಾಂಟೀನ್ ಒಟ್ಟು 211.24 ಕೋಟಿ ರೂ ಮೊತ್ತದ ಯೋಜನೆಯಾಗಿದ್ದು, ಈಗಾಗಲೇ ರಾಜ್ಯದಲ್ಲಿ 136 ಇಂದಿರಾ ಕ್ಯಾಂಟೀನ್ ಗಳ ಕಾರ್ಯಾರಂಭಗೊಂಡಿದೆ. ರಾಜ್ಯದಲ್ಲಿ ಜಿಲ್ಲೆ ಹಾಗೂ ತಾಲ್ಲೂಕು ಸೇರಿ ಒಟ್ಟು 263 ಇಂದಿರಾ ಕ್ಯಾಂಟಿನ್ ತೆರೆಯಲು ಯೋಜನೆಯನ್ನು ಕೈಗೊಳ್ಳಲಾಗಿದೆ. ಅಡುಗೆ ಕೋಣೆ ಸಮೇತ 171, ಇಲ್ಲದೆ 71 ಕ್ಯಾಂಟೀನ್ ಹಾಗೂ 15 ಕೇವಲ ಕ್ಯಾಂಟೀನ್ ನ್ನು ಒಳಗೊಳ್ಳಲಿದೆ ಎಂದು ಮಾಹಿತಿ ನೀಡಿದರು. .