News Karnataka Kannada
Friday, April 26 2024
ಕರಾವಳಿ

ಕರ್ನಾಟಕ ಬ್ಯಾಂಕ್ ಮಾಜಿ ಅಧ್ಯಕ್ಷರಿಗೆ ಶ್ರದ್ಧಾಂಜಲಿ

Photo Credit :

ಕರ್ನಾಟಕ ಬ್ಯಾಂಕ್ ಮಾಜಿ ಅಧ್ಯಕ್ಷರಿಗೆ ಶ್ರದ್ಧಾಂಜಲಿ

ಬಂಟ್ವಾಳ: ಕರ್ನಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಅನಂತಕೃಷ್ಣ ಅವರಿಗೆ ಹುಟ್ಟೂರ ಶ್ರದ್ಧಾಂಜಲಿ  ಸಜೀಪಮೂಡದ ಕರ್ನಾಟಕ ಬ್ಯಾಂಕ್ ವಠಾರದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ ಅಧ್ಯಕ್ಷತೆಯಲ್ಲಿ ಜರಗಿತು.

ಪೂಂಜ ಅವರು ಮಾತನಾಡಿ ಅನಂತ ಕೃಷ್ಣರ ತೀರ್ಥರೂಪರಾದ  ನಾರಾಯಣ ರಾವ್ ಶಾನುಭೋಗರಾಗಿ  ಸಜಿಪದ ಆಸುಪಾಸು ಗ್ರಾಮಗಳೆಲ್ಲಾ ಜನಪ್ರಿಯರಾಗಿದ್ದರು. ಅವರ ಪುತ್ರ ಅನಂತಕೃಷ್ಣ ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಕರ್ನಾಟಕ ಬ್ಯಾಂಕನ್ನು ವಿಶ್ವಮಟ್ಟದಲ್ಲಿ ರೂಪಿಸುವಲ್ಲಿ ಯಶಸ್ವಿಯಾಗಿದ್ದರು. ಸಜೀಪ ದಂತಹ  ಗ್ರಾಮೀಣ ಭಾಗದಲ್ಲಿ ಬ್ಯಾಂಕ್ ಶಾಖೆಯನ್ನು ಒದಗಿಸಿಕೊಟ್ಟು ಗ್ರಾಮದ ಆರ್ಥಿಕ ಸುಧಾರಣೆಗೆ ಕಾರಣೀಭೂತರಾಗಿದ್ದಾರೆ. ಅನಂತ ಕೃಷ್ಣರು ಹಾಗೂ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು.

ಬಳಿಕ ಮೃತರ ಆತ್ಮಕ್ಕೆ ಶಾಂತಿಕೋರಿ ಮೌನಾಚರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ಸಜಿಪಮೂಡ ಶಾಖಾ  ಪ್ರಬಂಧಕ ಮಿತಿಲೇಶ್ ಕುಮಾರ್,  ಸುಮನ್ ಕೆ.ಎ., ರಾಮಚಂದ್ರಯ್ಯ,  ರಾಘವೇಂದ್ರ ಕುಮಾರ್ ಪ್ರಣಮ್, ಪ್ರಶಾಂತ್ ಕುಮಾರ್, ಪ್ರಮುಖರಾದ ಎo ಸುಬ್ರಮಣ್ಯ ಭಟ್, ಜಯಶಂಕರ ಬಾಸ್ರಿತ್ತಾಯ,  ವೆಂಕಟೇಶ್ವರ ಭಟ್, ದೇವಿ ಪ್ರಸಾದ್ ಪೂಂಜಾ,  ಕೆ. ಸೀತಾರಾಮ ಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಬಾಬು ಗಾವಂಕರ್, ಹರೀಶ್ ಗಟ್ಟಿ,  ವೆಂಕಟರಾಯ ಮಯ್ಯ, ಶ್ರೀನಾಥ್ ಶೆಟ್ಟಿ, ವಿಶ್ವನಾಥ್ ಬೆಳ್ಚಾಡ,  ವಿಶ್ವನಾಥ್ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು