ಬಂಟ್ವಾಳ: ಕರ್ನಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಅನಂತಕೃಷ್ಣ ಅವರಿಗೆ ಹುಟ್ಟೂರ ಶ್ರದ್ಧಾಂಜಲಿ ಸಜೀಪಮೂಡದ ಕರ್ನಾಟಕ ಬ್ಯಾಂಕ್ ವಠಾರದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ ಅಧ್ಯಕ್ಷತೆಯಲ್ಲಿ ಜರಗಿತು.
ಪೂಂಜ ಅವರು ಮಾತನಾಡಿ ಅನಂತ ಕೃಷ್ಣರ ತೀರ್ಥರೂಪರಾದ ನಾರಾಯಣ ರಾವ್ ಶಾನುಭೋಗರಾಗಿ ಸಜಿಪದ ಆಸುಪಾಸು ಗ್ರಾಮಗಳೆಲ್ಲಾ ಜನಪ್ರಿಯರಾಗಿದ್ದರು. ಅವರ ಪುತ್ರ ಅನಂತಕೃಷ್ಣ ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಕರ್ನಾಟಕ ಬ್ಯಾಂಕನ್ನು ವಿಶ್ವಮಟ್ಟದಲ್ಲಿ ರೂಪಿಸುವಲ್ಲಿ ಯಶಸ್ವಿಯಾಗಿದ್ದರು. ಸಜೀಪ ದಂತಹ ಗ್ರಾಮೀಣ ಭಾಗದಲ್ಲಿ ಬ್ಯಾಂಕ್ ಶಾಖೆಯನ್ನು ಒದಗಿಸಿಕೊಟ್ಟು ಗ್ರಾಮದ ಆರ್ಥಿಕ ಸುಧಾರಣೆಗೆ ಕಾರಣೀಭೂತರಾಗಿದ್ದಾರೆ. ಅನಂತ ಕೃಷ್ಣರು ಹಾಗೂ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು.
ಬಳಿಕ ಮೃತರ ಆತ್ಮಕ್ಕೆ ಶಾಂತಿಕೋರಿ ಮೌನಾಚರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ಸಜಿಪಮೂಡ ಶಾಖಾ ಪ್ರಬಂಧಕ ಮಿತಿಲೇಶ್ ಕುಮಾರ್, ಸುಮನ್ ಕೆ.ಎ., ರಾಮಚಂದ್ರಯ್ಯ, ರಾಘವೇಂದ್ರ ಕುಮಾರ್ ಪ್ರಣಮ್, ಪ್ರಶಾಂತ್ ಕುಮಾರ್, ಪ್ರಮುಖರಾದ ಎo ಸುಬ್ರಮಣ್ಯ ಭಟ್, ಜಯಶಂಕರ ಬಾಸ್ರಿತ್ತಾಯ, ವೆಂಕಟೇಶ್ವರ ಭಟ್, ದೇವಿ ಪ್ರಸಾದ್ ಪೂಂಜಾ, ಕೆ. ಸೀತಾರಾಮ ಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಬಾಬು ಗಾವಂಕರ್, ಹರೀಶ್ ಗಟ್ಟಿ, ವೆಂಕಟರಾಯ ಮಯ್ಯ, ಶ್ರೀನಾಥ್ ಶೆಟ್ಟಿ, ವಿಶ್ವನಾಥ್ ಬೆಳ್ಚಾಡ, ವಿಶ್ವನಾಥ್ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.