News Karnataka Kannada
Friday, April 19 2024
Cricket
ಕರಾವಳಿ

ಕಾಸರಗೋಡಿನಲ್ಲಿ ತೆಂಗಿಗೆ ಹುಳಬಾದೆ

Photo Credit :

ಕಾಸರಗೋಡಿನಲ್ಲಿ ತೆಂಗಿಗೆ ಹುಳಬಾದೆ

ಕಾಸರಗೋಡು: ತೆಂಗಿಗೆ ಹುಳಬಾಧೆ ಮತ್ತೆ ಕಂಡು ಬಂದಿದೆ. ಕೇರಳ  ಸೇರಿದಂತೆ ಕರಾವಳಿಯ ಹಲವೆಡೆಗಳಲ್ಲಿ ತೆಂಗುಗಳು ಹಳದಿ ಬಣ್ಣಕ್ಕೆ ತಿರುಗಿದೆ. ಕೆಲ ವರ್ಷಗಳ ಹಿಂದೆ  ಕಂಡು ಬಂದು ಬಳಿಕ ದೂರವಾಗಿದ್ದ ಹುಳು ಬಾಧೆ ಇದೀಗ ಬಿಸಿಲ ತಾಪ ಹೆಚ್ಚುತ್ತಿದ್ದಂತೆ ವಕ್ಕರಿಸತೊಡಗಿದೆ.

ಆರಂಭದಲ್ಲಿ ಈ ಕೀಟ ಬಾಧೆಗೆ  ಕಡಿವಾಣ ಹಾಕದಿದ್ದಲ್ಲಿ ತೆಂಗಿಗೆ ಮಾರಕವಾಗಿ ಈ ಹುಳುಬಾಧೆ ಪರಿಣಮಿಸಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ತೆಂಗಿನ ಮಡಲು ಸಂಪೂರ್ಣವಾಗಿ ಹಳದಿ ಬಣ್ಣಕ್ಕೆ ತಿರುಗಿ  ಫಸಲು  ಸಂಪೂರ್ಣ ಕುಸಿಯುತ್ತಿದೆ.
ಜಿಲ್ಲೆಯ ನೀಲೇಶ್ವರ, ಕಾಪಾಡ್, ಪರಪ್ಪನಂಗಡಿ ಇತರ ಪ್ರದೇಶಗಳಲ್ಲಿ ಈ ಕೀಟಬಾಧೆ ಉಂಟಾಗಿದೆ. ಉಳ್ಳಾಲದಲ್ಲೂ ಕೀಟಬಾಧೆ ಪತ್ತೆಯಾಗಿದೆ ಎನ್ನಲಾಗಿದೆ. ವೇಗವಾಗಿ ಒಂದು ಮರದಿಂದ ಇನ್ನೊಂದು ಮರಕ್ಕೆ ಈ ಕೀಟಬಾಧೆ ಹರಡುತ್ತಿದೆ. ಮಡಲಿನ ಅಡಿಭಾಗದಲ್ಲಿ ಹುಳುಗಳು ಉತ್ಪತ್ತಿಯಾಗುತ್ತಿದ್ದು, ಇದು ಒಂದು ಮರದಿಂದ ಇನ್ನೊಂದು ಮರಕ್ಕೆ ವೇಗವಾಗಿ ಹರಡುತ್ತಿದೆ.
ಕೀಟಬಾಧೆ ಹರಡುತ್ತಿದ್ದರೂ ಕೃಷಿ ಇಲಾಖೆ ನಿಯಂತ್ರಣಕ್ಕೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಕೇಂದ್ರ ತೋಟಗಾರಿಕಾ ಸಂಶೋಧನಾ ಕೇಂದ್ರವು ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ನಡೆಸಿದ್ದು , ರೋಗ ನಿಯಂತ್ರಣ ಕುರಿತು ಈಗಾಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಆದರೂ  ಕೀಟ ಬಾಧೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು