News Karnataka Kannada
Thursday, April 25 2024
ಕರಾವಳಿ

ಧರ್ಮಸ್ಥಳಕ್ಕೆ ಬಿಬಿಎಂಪಿಯಿಂದ ಕುಡಿಯುವ ನೀರು ಹಸ್ತಾಂತರ

Photo Credit :

ಧರ್ಮಸ್ಥಳಕ್ಕೆ ಬಿಬಿಎಂಪಿಯಿಂದ ಕುಡಿಯುವ ನೀರು ಹಸ್ತಾಂತರ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೀರಿನ ಕೊರತೆಯನ್ನು ಪರಿಗಣಿಸಿ ಬೆಂಗಳೂರು ಬಿಬಿಎಂಪಿ ನೌಕರರು ಮತ್ತು ಅಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಕಳುಹಿಸಿದ ನೀರಿನ ಕ್ಯಾನ್‍ಗಳು ಧರ್ಮಸ್ಥಳ ಕ್ಷೇತ್ರಕ್ಕೆ ತಲುಪಿದೆ.

ಶ್ರೀಕ್ಷೇತ್ರ ಧಮಸ್ಥಳಕ್ಕೆ ಬಿಬಿಎಂಪಿ ಕೊಡುಗೆಯಾಗಿ ನೀಡಿದ ಕುಡಿಯುವ ನೀರಿನ ಕ್ಯಾನ್‍ಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹಸ್ತಾಂತರಿಸಲಾಯಿತು.

20 ಲೀಟರ್ ನ 300 ಕ್ಯಾನ್, ಹಾಗೂ 10 ಲೀಟರ್ ನ 350 ಕ್ಯಾನ್ ಸೇರಿದಂತೆ ಒಟ್ಟು 10 ಸಾವಿರ ಲೀಟರ್ ಕ್ಷೇತ್ರಕ್ಕೆ ತಲುಪಿದೆ.

ಬೆಂಗಳೂರಿನ ಉದ್ಯಮಿ ಮಹೇಶ್ ಎಂಬುವವರು 7.50 ಸಾವಿರ ಲೀಟರ್ ನೀಡಿದ್ದು, ಉಳಿದಂತೆ ಇನ್ನಷ್ಟು ಮಂದಿ ಭಕ್ತರು ನೀರು ಕಳುಹಿಸಲು ಮುಂದಾಗಿ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡುತ್ತಿದ್ದಾರೆ. ಬುಧವಾರ ಸಂಜೆ ಬೆಂಗಳೂರಿನ ಚಾಲಕ ಸಂಘದಿಂದ 2 ಸಾವಿರ ಮಂದಿ ಸೇರಿ 7 ಸಾವಿರ ಲೀಟರ್ ಕ್ಷೇತ್ರಕ್ಕೆ ಕಳುಹಿಸಿದ್ದಾರೆ. ಈಗಾಗಲೇ ಬಸವನಗುಡಿ ಸುಂಕೇನಹಳ್ಳಿಯ ಭಕ್ತರು 6,780 ಲೀಟರ್ ಹಸ್ತಾಂತರಿದ್ದರು.

ಒಟ್ಟಾರೆಯಾಗಿ ಈವರೆಗೆ 30 ಸಾವಿರ ಲೀಟರ್ ಗೂ ಹೆಚ್ಚು ನೀರಿನ ಕ್ಯಾನ್ ಬಂದು ಸೇರಿದೆ ಎಂದು ಕ್ಷೇತ್ರದಿಂದ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು