News Karnataka Kannada
Thursday, April 25 2024
Cricket
ಕರಾವಳಿ

ಲಾರಿ ಕಂದಕಕ್ಕೆ ಉರುಳಿ ಚಾಲಕ ಮೃತ್ಯು

Photo Credit :

ಲಾರಿ ಕಂದಕಕ್ಕೆ ಉರುಳಿ ಚಾಲಕ ಮೃತ್ಯು

ಕಾಸರಗೋಡು:  ಲಾರಿ ಕಂದಕಕ್ಕೆ ಉರುಳಿ ಚಾಲಕ ಮೃತಪಟ್ಟು, ಕ್ಲೀನರ್ ಗಂಭೀರವಾಗಿ ಗಾಯಗೊಂಡ ಘಟನೆ ಮಂಜೇಶ್ವರ ಸಮೀಪದ ಮಜಿಬೈಲ್ ನಲ್ಲಿ ಮಂಗಳವಾರ ನಡೆದಿದೆ.


ಮೃತಪಟ್ಟವರನ್ನು ಮಂಗಲ್ಪಾಡಿ  ಪುಳಿಕುತ್ತಿಯ ಪ್ರಕಾಶ್ ( 38) ಎಂದು ಗುರುತಿಸಲಾಗಿದೆ. ಕ್ಲೀನರ್  ಮಂಜೇಶ್ವರದ  ಶರೀಫ್ ( 32) ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಜಿಬೈಲು ಸಮೀಪದ ಪಜಿಂಗಾರು ಎಂಬಲ್ಲಿನ ತಿರುವಿನಲ್ಲಿ ಅಪಘಾತ ಸಂಭವಿಸಿದೆ.

ಲಾರಿಯು ಮೀಯಪದವಿನಿಂದ ಕೆಂಪು ಕಲ್ಲು ಗಳನ್ನು ಹೇರಿಕೊಂಡು ಹೊಸಂಗಡಿಗೆ ಹೊಸಂಗಡಿಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಸುಮಾರು 60 ಅಡಿ ಆಳದ ಕಂದಕಕ್ಕೆ ಮಗುಚಿ ಬಿದ್ದಿದೆ. ಲಾರಿಯಡಿಯಲ್ಲಿ ಸಿಲುಕಿದ್ದ ಚಾಲಕ ಪ್ರಕಾಶ್ ಹಾಗೂ ಕ್ಲೀನರ್ ಶರೀಫ್ ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಇಬ್ಬರನ್ನು ಹೊರತೆಗೆದು ಮಂಗಳೂರಿನ ಆಸ್ಪತ್ರೆಗೆ  ಕೊಂಡೊಯ್ದರೂ ಪ್ರಕಾಶ್ ದಾರಿಮಧ್ಯೆ ಮೃತಪಟ್ಟರು. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು