ಕಾಸರಗೋಡು: ಹೋಟೆಲ್ ಗೆ ನುಗ್ಗಿ ಕಳವು ನಡೆಸಿದ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಟ್ಟನ್ನೂರಿನ ಅಬ್ದುಲ್ ಜಲೀಲ್ (35) ಎಂದು ಗುರುತಿಸಲಾಗಿದೆ. ಮಂಜೇಶ್ವರದಲ್ಲಿ ಹೋಟೆಲ್ ನ ಶಟರ್ ಮುರಿದು ಕಳವು ಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದ್ದು,ಈತ ಕುಂಬಳೆ, ಮಂಜೇಶ್ವರ ವ್ಯಾಪ್ತಿಯಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಶಾಮಿಲಾಗಿದ್ದಾನೆ. ಮಂಜೇಶ್ವರದ ಹೋಟೆಲ್ ನಿಂದ ಒಂದು ಸಾವಿರ ರೂ. ನಗದನ್ನು ಕಳವು ಮಾಡಿದ್ದನು. ಜನವರಿ ಹತ್ತರಂದು ಘಟನೆ ನಡೆದಿದ್ದು, ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು.