ಮೂಡುಬಿದಿರೆ: ಎಪಿಎಂಸಿ ಚುನಾವಣೆ ಸಂದರ್ಭದಲ್ಲಿ ಸೋತ ಅಭ್ಯರ್ಥಿಗೆ ಗೆದ್ದ ಅಭ್ಯರ್ಥಿ ತನ್ನ ವಿಜಯೋತ್ಸವ ಸಂದರ್ಭದಲ್ಲಿ ಶನಿವಾರ ಹೊಸಬೆಟ್ಟು ಗ್ರಾಮದ ಮಾಸ್ತಿಕಟ್ಟೆ ಎಂಬಲ್ಲಿ ಹಲ್ಲೆ ನಡೆಸಿದ್ದು, ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಕಲ್ಲಮುಂಡ್ಕೂರು ಎಪಿಎಂಸಿ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಿಂದ ಚಂದ್ರಹಾಸ ಸನಿಲ್, ಬಿಜೆಪಿಯಿಂದ ವಲೇರಿಯನ್ ಕುಟಿನ್ನೊ ಮತ್ತು ಜೆಡಿಯಸ್ ನಿಂದ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನಿನ್ನೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚಂದ್ರಹಾಸ ಸನಿಲ್ ಅಧಿಕ ಮತಗಳಿಂದ ಜಯಭೇರಿ ಗಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸನಿಲ್ ಪರ ವಿಜಯೋತ್ಸವ ಆಚರಣೆ ನಡೆಸಿದ್ದು, ಪಟಾಕಿ ಸಿಡಿಸಿ ಜಯಘೋಷ ಹಾಕುತ್ತಾ ಇದ್ದ ಸಂದರ್ಭ ಹೊಸಬೆಟ್ಟು ಎಂಬಲ್ಲಿ ಪರಾಜಿತ ಅಭ್ಯರ್ಥಿ ವರೀಯನ್ ವಿಜಯೋತ್ಸವಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಕೈ ಕಾರ್ಯಕರ್ತರು ವಲೇರಿಯನ್ನ್ನು ಪ್ರಶ್ನಿಸಿದ್ದು, ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಿದ್ದಾರೆ. ವಲೇರಿಯನ್ ಸದ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂಡುಬಿದಿರೆ ಪೊಲೀಸರು ಚಂದ್ರಹಾಸ ಸನಿಲ್, ಜಯರಾಮ ಬಂಗೇರಾ, ಸಂತೋಷ್ ಶೆಟ್ಟಿ, ಚೇತನ್, ದೀಪಕ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.