ಕಾಸರಗೋಡು: ಬಳಾಲ್ ನ ರಕ್ಷಿತಾರಣ್ಯದಲ್ಲಿ ಪ್ರಾಚೀನ ಶಿಲೆ ಗಳು ಪತ್ತೆಯಾಗಿದ್ದು , ಗಮನ ಸೆಳೆಯುತ್ತಿದೆ. ಈ ಶಿಲೆಗಳು ದಶಕಗಳ ಹಿಂದೆ ಬುಡಕಟ್ಟು ಜನಾಂಗದ ಮುಖ್ಯಸ್ಥರು ಆಸನಕ್ಕಾಗಿ ಬಳಸುತ್ತಿದ್ದರು ಎಂದು ನಂಬಲಾಗಿದೆ.
ಧರ್ಮಾಧಾರಿತ ಕೆಲ ಆಚರಣೆಗೂ ಈ ಶಿಲೆಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಮಾರ್ದೋಮ್ ಎಂಬಲ್ಲಿನ ರಕ್ಷಿತಾರಣ್ಯದಲ್ಲಿ ಶಿಲೆಗಳು ಪತ್ತೆಯಾಗಿದೆ. ರಕ್ಷಿತಾರಣ್ಯದಿಂದ ಆನೆಗಳು ನಾಡಿಗಿಳಿಯುತ್ತಿದ್ದು, ಈ ಹಿನ್ನಲೆಯಲ್ಲಿ ಗೋಡೆ ಕಟ್ಟುವ ಕೆಲಸ ನಡೆಯುತ್ತಿದ್ದು, ಅಗೆಯುತ್ತಿದ್ದಾಗ ಶಿಲೆಗಳು ಪತ್ತೆಯಾಗಿದೆ . ಮೂರು ವರ್ಷಗಳ ಹಿಂದೆ ಇದೆ ರಕ್ಷಿತಾರಣ್ಯದ ಇನ್ನೊಂದು ಬದಿಯಲ್ಲಿ ಇಂತಹ ಶಿಲೆಗಳು ಪತ್ತೆಯಾಗಿತ್ತು.
ಅಂದು ಪತ್ತೆಯಾದ ಶಿಲಾ ಕಲ್ಲುಗಳ ಬಗ್ಗೆ ಕೇರಳ ಆರ್ಕಿಯಾಲಾಜಿಕಲ್ ಇಲಾಖೆಗೆ ಮಾಹಿತಿ ನೀಡಿದ್ದರೂ ಈ ಬಗ್ಗೆ ಇದುವರೆಗೂ ಯಾವುದೇ ರೀತಿಯ ಅಧ್ಯಯನ ನಡೆಸಿಲ್ಲ. ಈಗ ಪತ್ತೆಯಾಗಿರುವ ಶಿಲೆಗಳ ಬಗ್ಗೆ ಆರ್ಕಿಯಾಲಿಜಿಕಲ್ ಸರ್ವೇ ಆಫ್ ಇಂಡಿಯಾಗೆ ಮಾತ್ತು ಜಿಯಾಲಾಜಿಕಲ್ ಸರ್ವೇ ಆಪ್ ಇಂಡಿಯಾಗೆ ಮಾಹಿತಿ ನೀಡಲಾಗಿದೆ . ಶಿಲೆಕಲ್ಲುಗಳನ್ನು ಗಮನಿಸಿದ ಸ್ಥಳೀಯರಾದ ಕೆ.ವಿ ಗೋಪಕುಮಾರ್ , ಪಿ . ಗೋಪಾಲನ್ , ಸಿಬಿಚ್ಚನ್ ಎಂಬವರು ನೀಡಿದ ಮಾಹಿತಿಯಂತೆ ಕಾಸರಗೋಡು ಸರಕಾರೀ ಕಾಲೇಜು ಜಿಯೋಲಾಜಿ ಇಲಾಖಾ ನಿವೃತ್ತ ಮುಖ್ಯಸ್ಥ ಪ್ರೊ.ವಿ. ಗೋಪಿನಾಥ ನ್, ನಂದಕುಮಾರ್ ಕೋರತ್ ಮೊದಲಾದವರು ಪರಿಶೀಲನೆ ನಡೆಸಿದ್ದಾರೆ.