ಮೂಡುಬಿದಿರೆ: ಮೂಡುಬಿದಿರೆ ಪೇಟೆಯ ಸಮೀಪವಿರುವ ಸ್ವರಾಜ್ಯ ಮೈದಾನದ ಬಳಿ ಓಮ್ನಿ ಕಾರೊಂದು ಬುಧವಾರ ತಾಂತ್ರಿಕ ದೋಷದಿಂದ ಬೆಂಕಿಗಾಹುತಿಯಾಗಿದೆ.
ಸಚ್ಚರಿಪೇಟೆಯ ನಿವಾಸಿ ಅಶ್ರಫ್ ಎಂಬವರು ತಮ್ಮ ಮನೆಯಿಂದ ರಿಂಗ್ರೋಡ್ ಮೂಲಕ ಮೂಡುಬಿದಿರೆ ಪೇಟೆಗೆ ಬರುತ್ತಿದ್ದರು. ಸ್ವರಾಜ್ಯ ಮೈದಾನದ ಬಳಿ ತಾಂತ್ರಿಕ ದೋಷದಿಂದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಜಾಗೃತರಾದ ಅಶ್ರಫ್ ಅವರು ಕೂಡಲೇ ಕಾರಿನಿಂದ ಇಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಇಂಜಿನ್ ಬೆಂಕಿಗಾಹುತಿಯಾಗಿದ್ದ, ಅದರ ಒಳಭಾಗ ಸಂಪೂರ್ಣವಾಗಿ ಸುಟ್ಟ ಹೋಗಿದೆ. ಮೂಡುಬಿದಿರೆ ಅಗ್ನಿ ಶಾಮಕದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.