ಕಾಸರಗೋಡು: ಸ್ಪಿರಿಟ್ ಸಾಗಾಟ ವೇಳೆ ಅಬಕಾರಿ ಅಧಿಕಾರಿಗಳಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು 16 ವರ್ಷಗಳ ನಂತರ ಬಂಧಿಸಲಾಗಿದೆ.
ಪಟ್ಟಾಂಬಿ, ತೆಕ್ಕುಮುರಿಯ ರಾಮಚಂದ್ರ (42) ಬಂಧಿತ ಆರೋಪಿ. ಮುಳ್ಳೇರಿಯ ಅಬಕಾರಿ ಅಧಿಕಾರಿಗಳು ಈತನ ಮನೆಯಿಂದ ಬಂಧಿಸಿದ್ದಾರೆ. 2000ನೇ ವರ್ಷದಲ್ಲಿ ಅಂಬಾಸಿಡರ್ ಕಾರಿನಲ್ಲಿ ಸ್ಪಿರಿಟ್ ಸಾಗಿಸುತ್ತಿದ್ದಾಗ ಬೋವಿಕ್ಕಾನ ಪರಿಸರದಲ್ಲಿ ಕಾರನ್ನು ತಡೆದು ನಿಲ್ಲಿಸಲಾಯಿತು. ಈ ವೇಳೆ ರಾಮಚಂದ್ರನ್ ಓಡಿ ಪರಾರಿಯಾಗಿದ್ದು, ಇನ್ನೋರ್ವ ನನ್ನ ಬಂಧಿಸಲಾಗಿತ್ತು.
ರಾಮಚಂದ್ರನ್ ವಿರುದ್ಧ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಆರೋಪಿ ವಿವಿಧ ಕಡೆಗಳಲ್ಲಿ ನಕಲಿ ಹೆಸರು ಹೇಳಿ ಕೆಲಸ ಮಾಡುತ್ತಿದ್ದ. ಹಲವು ಬಾರಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದರೂ ಈತನನ್ನು ಸೆರೆಹಿಡಿಯಲಾಲಿಲ್ಲ ಈ ನಡುವೆ ಈತ ಮನೆಗೆ ತಲಪಿರುವುದಾಗಿ ಲಭಿಸಿದ ಮಾಹಿತಿಯಂತೆ ಅಬಕಾರಿ ದಳದ ಸಿಬ್ಬಂದಿಗಳು ಬುಧವಾರ ಬೆಳಿಗ್ಗೆ ಈತನನ್ನು ಬಂಧಿಸಿದರು.