News Kannada
Saturday, March 25 2023

ಕರಾವಳಿ

ಆಡಿನ ವಿಚಾರ: ಕುಟುಂಬದ ಮೇಲೆ ಹಲ್ಲೆ

Photo Credit :

ಆಡಿನ ವಿಚಾರ: ಕುಟುಂಬದ ಮೇಲೆ ಹಲ್ಲೆ

ಉಳ್ಳಾಲ: ಆಡಿನ ವಿಚಾರಕ್ಕೆ ಸಂಬಂಧಿಸಿ ನೆರೆಮನೆಯ ಯುವಕನೋರ್ವ ರಾಡಿನಿಂದ  ವೃದ್ಧ ದಂಪತಿ ಸೇರಿದಂತೆ ಅವರ ಪುತ್ರನಿಗೆ ಹಲ್ಲೆ ನಡೆಸಿರುವ ಘಟನೆ ಕಿನ್ಯಾ ಶಾಲೆ ಸಮೀಪದ ಬೆಳರಿಂಗೆ ಬಳಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದ್ದು, ಗಾಯಗೊಂಡಿರುವ ಮೂವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

Goat fuels fight between neighbours; Family of three assaulted by youth in Ullal-1ಕಿನ್ಯಾ ಬೆಳರಿಂಗೆ ನಿವಾಸಿಗಳಾದ ಜನಾರ್ದನ ಆಳ್ವ (70), ಅವರ ಪತ್ನಿ  ಪುಷ್ಪಾವತಿ (52) ಹಾಗೂ ಪುತ್ರ ಅಜಿತ್ (30)  ದಾಳಿಗೊಳಗಾದವರು.  ನೆರೆಮನೆಯ  ಸಫಾಕ್ ((28) ಆತನ ಸಹೋದರನ ನೆರವಿನಿಂದ ದಾಳಿ ನಡೆಸಿರುವುದಾಗಿ ಹಲ್ಲೆಗೊಳಗಾದ ಕುಟುಂಬಸ್ಥರು ಆರೋಪಿಸಿದ್ದಾರೆ.  ಸಂಜೆ ವೇಳೆ  ಜನಾರ್ದನ ಹಾಗೂ ಮನೆಯವರು ಟಿ.ವಿ ನೋಡುತ್ತಿದ್ದ ಸಂದರ್ಭ ನೆರೆಮನೆಯ ಸಫಾಕ್  ರಾಡಿನಿಂದ ನಾಯಿಗೆ ಬಡಿಯಲು ಆರಂಭಿಸಿದ್ದನು. ಇದನ್ನು ಕಂಡು ಜನಾರ್ದನ ಅವರು ಪ್ರಶ್ನಿಸುತ್ತಿದ್ದಂತೆ ಅವರ ಮೇಲೆಯೂ  ರಾಡಿನಿಂದ ಹಲ್ಲೆ ನಡೆಸಿದ್ದಾನೆ. ಇದನ್ನು ಕಂಡ ಪುತ್ರ ಅಜಿತ್ ತಡೆಯಲು ಮುಂದಾದಾಗ ಅವರ ಮೇಲೂ ಕೈಯಿಂದ ಹಲ್ಲೆ ನಡೆಸಿದ್ದಾನೆ. ಇದನ್ನು ತಡೆಯಲು ಬಂದ ತಾಯಿ ಪುಷ್ಪಾವತಿ ಅವರ ಮೇಲೂ ಮುಗಿಬಿದ್ದ ಸಫಾಕ್, ತನ್ನ ಸಹೋದರನ ಸಹಾಯದಿಂದ ಮೂವರಿಗೂ ಹಲ್ಲೆ ನಡೆಸಿ, ಜೀವಬೆದರಿಕೆಯೊಡ್ಡಿದ್ದಾನೆ.

ಸಫಾಕ್ ಮನೆಮಂದಿ ಸಾಕುತ್ತಿದ್ದ ಆಡು  ಜನಾರ್ದನ ಅವರ ಮನೆಯ ಹಿತ್ತಿಲಿಗೆ ಬಂದು  ಅಡಿಕೆಯ ಗಿಡಗಳನ್ನು ತಿನ್ನುತಿತ್ತು. ಹಲವು ಸಮಯದಿಂದ ಇದೇ ಪರಿಪಾಠ ಮುಂದುವರಿದಾಗ ನೊಂದ  ಜನಾರ್ಧನ ಅವರು  ಸಫಾಕ್ ಮನೆಗೆ ತೆರಳಿ ಆಡು ಕಟ್ಟಿಹಾಕುವಂತೆ ಆತನ ತಂದೆಯಲ್ಲಿ ಸೂಚಿಸಿದ್ದರು. ಆದರೂ ಕಟ್ಟಿಹಾಕದೇ ಇದ್ದುದರಿಂದ ಬುಧವಾರವೂ  ಆಡು  ಜನಾರ್ದನ ಅವರ ಮನೆ  ಅಂಗಳಕ್ಕೆ ಪ್ರವೇಶಿಸಿತ್ತು. ಇದರಿಂದ ಕೆರಳಿದ ಮನೆಮಂದಿ  ಹೊಡೆದು ಓಡಿಸಿದ್ದರು.  ಇದಕ್ಕೆ ಆಕ್ರೋಶಗೊಂಡ ಸಫಾಕ್ ರಾಡಿನಿಂದ ಹಲ್ಲೆ ನಡೆಸಿರುವುದಾಗಿ ಆಸ್ಪತ್ರೆಯಲ್ಲಿರುವ ಗಾಯಾಳುಗಳು ಆರೋಪಿಸಿದ್ದಾರೆ.  ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
 

See also  ಸರ್ಕಾರದ ವಿರುದ್ಧ ಹರಿಹಾಯ್ದ ಲೋಕಾಯುಕ್ತ ನ್ಯಾಯಾಮೂರ್ತಿ ಸಂತೋಷ್ ಹೆಗ್ಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು