News Kannada
Saturday, April 01 2023

ಕರಾವಳಿ

ಮದ್ರಸ ಶಿಕ್ಷಕ ರಿಯಾಜ್ ಕೊಲೆ ಪ್ರಕರಣ: ಯುವಜನ ಒಕ್ಕೂಟದ ವತಿಯಿಂದ ಧರಣಿ

Photo Credit :

ಮದ್ರಸ ಶಿಕ್ಷಕ ರಿಯಾಜ್ ಕೊಲೆ ಪ್ರಕರಣ: ಯುವಜನ ಒಕ್ಕೂಟದ ವತಿಯಿಂದ ಧರಣಿ

ಕಾಸರಗೋಡು: ಮದ್ರಸ ಶಿಕ್ಷಕ ರಿಯಾಜ್ ಕೊಲೆ ಪ್ರಕರಣದ ಹಿಂದಿನ ಸಂಚನ್ನು ಬಯಲಿಗೆ ತರಬೇಕು, ಎಲ್ಲಾ ಆರೋಪಿಗಳನ್ನು ಬಂಧಿಸಬೇಕು, ಪ್ರಕರಣ ವಿಚಾರಣೆಗೆ ವಿಶೇಷ ಪ್ರಾಷಿಕ್ಯೂಟರನ್ನು ನೇಮಿಸಬೇಕು, ಕಾಸರಗೋಡಿನಲ್ಲಿ ಶಾಂತಿ ಕಾಪಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕಾಸರಗೋಡು ಯುವಜನ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಯಿತು.

ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಮೂರು ಗಂಟೆ ತನಕ ನಡೆದ ಧರಣಿಯಲ್ಲಿ ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಕೇರಳದಲ್ಲಿ ಕೋಮುವಾದಿ ಶಕ್ತಿಗಳು ಬೇರೂರಲು ಪ್ರಯತ್ನಿಸುತ್ತಿದ್ದು ಇಂತಹ ಶಕ್ತಿಗಳನ್ನು ಕಿತ್ತೊಗೆಯಬೇಕು, ಗುಜಾರಾತ್ ನಲ್ಲಿ ನಡೆಸಿದ ಕೋಮುಗಲಭೆಯನ್ನು ಕಾಸರಗೋಡು ಮೂಲಕ ಕೇರಳದಲ್ಲೂ ಸೃಷ್ಟಿಸಿ ಕೋಮು ಧ್ರುವೀಕರಣಕ್ಕೆ ಸಂಘ ಪರಿವಾರ ಹುನ್ನಾರ ನಡೆಯುತ್ತಿದೆ ಎಂದು ಧರಣಿಯನ್ನು ಉದ್ಘಾಟಿಸಿದ ಪಿಡಿಪಿ ರಾಜ್ಯ ಮಾಜಿ ಕಾರ್ಯಾಧ್ಯಕ್ಷ ಸಿ. ಕೆ ಅಬ್ದುಲ್ ಅಝೀಜ್ ಅಭಿಪ್ರಾಯಪಟ್ಟರು.

ಯುವಜನ ಒಕ್ಕೊಟದ ಜಿಲ್ಲಾಧ್ಯಕ್ಷ ಇಬ್ರಾಹಿಂ ಬಾಂಗೋಡ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ರಾಜಕೀಯ ಪಕ್ಷದ ಮುಖಂಡರಾದ ಮಾಜಿ ಶಾಸಕ ಸಿ. ಎಚ್ ಕುಞoಬು, ಕರೀಂ ಚಂದೇರ, ಸ್ವಾಮಿ ವರ್ಕಲ ರಾಜ್, ಎ. ಬಿ ಬಾಲಕೃಷ್ಣನ್, ಎ.ಕೆ. ಎಂ ಅಶ್ರಫ್, ಕೆ.ಮಣಿಕಂಠನ್, ರಿಯಾಜ್ ಫರಂಗಿಪೇಟೆ, ವಿನೋದ್, ನೌಫಾಲ್ ಉಳಿಯತ್ತಡ್ಕ, ಯೂಸಫ್, ವಿ. ವಿ ಪ್ರಭಾಕರನ್, ಅಶ್ರಫ್ ಬಾಯಾರ್, ಝುಬೈರ್ ಪೆಡುಪ್ಪು ಮೊದಲಾದವರು ಉಪಸ್ಥಿತರಿದ್ದರು.

See also  ಕೇಂದ್ರ ಸರ್ಕಾರದ ಸಶಕ್ತೀಕರಣ ರಾಷ್ಟ್ರಪ್ರಶಸ್ತಿಗೆ ಕೊಡಗು ಸಂಪಾಜೆ ಗ್ರಾಮ ಪಂಚಾಯಿತಿ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು