News Kannada
Tuesday, March 21 2023

ಕರಾವಳಿ

ಕಾರು ಅಪಘಾತ : ಉದ್ಯಮಿ ಸಾವು

Photo Credit :

ಕಾರು ಅಪಘಾತ : ಉದ್ಯಮಿ ಸಾವು

ಮುಡಿಪು: ಸ್ವಿಫ್ಟ್ ಕಾರು ಅಪಘಾತಕ್ಕೀಡಾಗಿ ವ್ಯಕ್ತಿಯೋರ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ  ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಪಡೀಲು ಸಮೀಪ  ಶುಕ್ರವಾರ ನಸುಕಿನ ಜಾವ ಸಂಭವಿಸಿದೆ.

ಮಂಜೇಶ್ವರದ  ಕಡಂಬಾರು ಇಡಿಯ ನಿವಾಸಿ  ಅಬೂಬಕರ್ ಎಂಬವರ ಪುತ್ರ ಯೂಸುಫ್ (38) ಸಾವನ್ನಪ್ಪಿದವರು.   ಇವರ ಜತೆಗಿದ್ದ ಖಲೀಲ್ ಎಂಬವರು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಯೂಸುಫ್ ಮತ್ತು ಖಲೀಲ್ ಸಕಲೇಶಪುರದಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿ ಸಂಜೆ ಮಂಜೇಶ್ವರದ ಮನೆಗೆ ವಾಪಸ್ಸಾಗುತ್ತಿದ್ದರು.  ತಡರಾತ್ರಿ ವೇಳೆ ಬೋಳಿಯಾರು ಪಡೀಲು ಸಮೀಪಿಸುತ್ತಿದ್ದಂತೆ  ನಿಯಂತ್ರಣ ತಪ್ಪಿದ ಕಾರು  ಹೊಂಡಕ್ಕೆ ಉರುಳಿ ಮರಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಪರಿಣಾಮ ಯೂಸುಫ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಮಂಜೇಶ್ವರದಲ್ಲಿ ಉದ್ಯಮ ನಡೆಸುತ್ತಿದ್ದು, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

 

See also  ಹೊಸ ಆಸ್ಪತ್ರೆಗಾಗಿ ಹಳೆ ಆಸ್ಪತ್ರೆಗೆ ಬೀಗ; ರೋಗಿಗಳಿಂದ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು