News Kannada
Thursday, March 30 2023

ಕರಾವಳಿ

ಶ್ರೀ ಸತ್ಯಾದೇವತಾ ಕಲ್ಲುರ್ಟಿ ದೈವಸ್ಥಾನದ ಮುಂದೆ ದನದ ಮಾಂಸ ಪತ್ತೆ: ಸ್ಥಳೀಯರಲ್ಲಿ ಆತಂಕ

Photo Credit :

ಶ್ರೀ ಸತ್ಯಾದೇವತಾ ಕಲ್ಲುರ್ಟಿ ದೈವಸ್ಥಾನದ ಮುಂದೆ ದನದ ಮಾಂಸ ಪತ್ತೆ: ಸ್ಥಳೀಯರಲ್ಲಿ ಆತಂಕ

ಬಂಟ್ವಾಳ: ಇಲ್ಲಿನ ಪಾಣೆಮಂಗಳೂರಿನಲ್ಲಿರುವ ಶ್ರೀ ಸತ್ಯಾದೇವತಾ ಕಲ್ಲುರ್ಟಿ ದೈವಸ್ಥಾನದ ಮುಂದೆ ಪ್ಲಾಟಿಕ್ ಲಕೋಟೆಯೊಂದರಲ್ಲಿ ಶನಿವಾರ ಬೆಳಿಗ್ಗೆ ದನದ ಮಾಂಸ ಪತ್ತೆಯಾಗಿ ಕೆಲ ಹೊತ್ತು ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಸ್ಥಿತಿ ನಿಭಾಯಿಸಿದ್ದಾರೆ.

ಬೆಳಗ್ಗಿನ ಜಾವ ವ್ಯಕ್ತಿಯೊಬ್ಬರು ದೈವಸ್ಥಾನದ ಬಳಿ ಬಂದಾಗ ಮೆಟ್ಟಿಲಲ್ಲಿ ಪ್ಲಾಸ್ಟಿಕ್ ನಲ್ಲಿ ಕಟ್ಟಿದ ವಸ್ತುವೊಂದು ಕಂಡು ಬಂದಿತ್ತು. ಅದನ್ನು ಪರಿಶೀಲಿಸಿದಾಗ ಅದು ಗೋಮಾಂಸವೆಂದು ತಿಳಿದು ಬಂದಿತ್ತು. ಅರ್ಚಕರು ಸ್ಥಳಕ್ಕೆ ಬಂದು ಸ್ಥಳ ಸ್ವಚ್ಛಗೊಳಿಸಿದ್ದರು. ಆದರೆ ಬಳಿಕ ಈ ವಿಚಾರ ಸಾಮಾಜಿಕ ಜಾಲ ತಾಣದಲ್ಲಿ ಹರಡಿ ಆತಂಕ ಸೃಷ್ಟಿಸಿತ್ತು. ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರ್ಮಾಣವಾಗಿರುವ ಅಶಾಂತಿ ವಾತವರಣದ ಲಾಭ ಪಡೆದುಕೊಳ್ಳುವ ದೃಷ್ಟಿಯಿಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದು ಎನ್ನುವ ದೂರುಗಳು ಕೇಳಿ ಬಂದಿದೆ.

ಸಾಮೂಹಿಕ ಪ್ರಾರ್ಥನೆ:
ಈ ಘಟನೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆಯ ಪ್ರಮುಖರು ದೈವಸ್ಥಾನದ ಮುಂದೆ ಕ್ರೂರ ಕೃತ್ಯ ಎಸಗಿದವರಿಗೆ ತಾಯಿ ಕಲ್ಲುರ್ಟಿಯೇ ಶಿಕ್ಷೆ ನೀಡಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಧಕೃಷ್ಣ ಅಡ್ಯಂತಾಯ, ವಿಭಾಗ ಸಂಚಾಲಕ ರವಿರಾಜ ಬಿ.ಸಿ.ರೋಡು, ಸಂಚಾಲಕ ಗಣರಾಜ ಭಟ್ ಕೆದಿಲ, ಮಧುರಾ ಭಟ್, ಪುರುಷೋತ್ತಮ ಕಲ್ಲಡ್ಕ ಮೊದಲಾದವರಿದ್ದರು.

 

See also  `ದಿ ಓಶಿಯನ್ ಪರ್ಲ್' ನ್ಯೂ ಇಯರ್ ಪಾರ್ಟಿಗೆ ಬಹುಮಾನಗಳ ಮಹಾಪೂರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು