News Kannada
Saturday, April 01 2023

ಕರಾವಳಿ

ಗಿಡಗಳನ್ನು ಕಿತ್ತೆಸೆದೆ ನ. ಪಂ.: ಸ್ವಚ್ಛ ಭಾರತ್ ಮಿಷನ್ ರಾಯಭಾರಿ ರಾಜೀನಾಮೆ

Photo Credit :

ಗಿಡಗಳನ್ನು ಕಿತ್ತೆಸೆದೆ ನ. ಪಂ.: ಸ್ವಚ್ಛ ಭಾರತ್ ಮಿಷನ್ ರಾಯಭಾರಿ ರಾಜೀನಾಮೆ

ಸುಳ್ಯ: ಸುಳ್ಯ ನಗರ ಪಂಚಾಯತಿಯ ಸ್ವಚ್ಚ ಭಾರತ್ ಮಿಷನ್ ರಾಯಭಾರಿ ಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ರಾಜೀನಾಮೆ ನೀಡಿದ್ದಾರೆ. ತಮ್ಮ ಮನೆಯ ಆವರಣ ಹೊಂದಿಕೊಂಡಿರುವ ಪ.ಪಂ.ನ ಗಡಿಭಾಗದ ಖಾಲಿ ಜಾಗದಲ್ಲಿ ಅಂದಾಜು 60 ಸಾವಿರ ರೂ. ವೆಚ್ಚದಲ್ಲಿ ನೆಟ್ಟಿರುವ ಗಿಡಗಳನ್ನು ನಗರ ಪಂಚಾಯಿತಿಯವರು ಕಿತ್ತೆಸೆದಿರುವುದಕ್ಕೆ ಬೇಸರಗೊಂಡು ರಾಜೀನಾಮೆ ನೀಡುತ್ತಿರುವುದಾಗಿ ರಾಜಿನಾಮೆ ಪತ್ರದಲ್ಲಿ ಅವರು ವಿವರಿಸಿದ್ದಾರೆ.

ಶನಿವಾರ ಚಿದಾನಂದ ಪುತ್ರ ಕೆ.ಸಿ.ಅಕ್ಷಯ್ ಹಾಗೂ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಜಗದೀಶ್ ಅಡ್ತಲೆ, ಆಯುರ್ವವೇದ ಕಾಲೇಜು ಆಡಳಿತಾಧಿಕಾರಿ ಡಾ.ಲೀಲಾಧರ್, ಮತ್ತಿತರರ ನೇತೃತ್ವದಲ್ಲಿ 50 ಕ್ಕೂ ಅಧಿಕ ಮಂದಿಯ ನಿಯೋಗ ತೆರಳಿ ರಾಜೀನಾಮೆ ಪತ್ರವನ್ನು ನ.ಪಂ. ಮುಖ್ಯಾಧಿಕಾರಿಯಾಗಿ ಗೋಪಾಲ ನಾಯ್ಕ್ ಹಸ್ತಾಂತರಿಸಿದರು. ಪತ್ರದ ಪ್ರತಿಯನ್ನು ಸಂಸದರು, ಕೇಂದ್ರ ಹಾಗೂ ರಾಜ್ಯ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಜನಪ್ರತಿನಿಧಿಗಳಿಗೆ ಕಳುಹಿಸಿದ್ದಾರೆ. ಎರಡು ವರ್ಷಗಳಿಂದ ಡಾ.ಕೆ.ವಿ.ಚಿದಾನಂದ ಅವರನ್ನು ನ.ಪಂ. ಸ್ವಚ್ಚತಾ ರಾಯಭಾರಿಯಾಗಿ ನೇಮಿಸಿತ್ತು. ಪತ್ರ ಸ್ವೀಕರಿಸಿದ ಮುಖ್ಯಾಧಿಕಾರಿ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ನಿಯೋಗಕ್ಕೆ ತಿಳಿಸಿದ್ದಾರೆ.

ಪ್ರಕರಣ ಏನು?
ಡಾ. ಕೆ.ವಿ.ಚಿದಾನಂದ ಅವರ ಮನೆ ಹಾಗೂ ಪಟ್ಟಣ ಪಂಚಾಯತಿ ಕಚೇರಿ ಹೊಂದಿಕೊಂಡಿದ್ದು ಗಡಿಭಾಗದಲ್ಲಿ ಹಿಂದೆ ಕಂಪೌಂಡ್ ಕಟ್ಟಿಸಿದ್ದರು. ಅದರ ಮೇಲ್ಬಾಗದಲ್ಲಿ ಗಿಡವೊಂದಕ್ಕೆ 750 ರೂ ಬೆಲೆ ಬಾಳುವ 49 ಬೋಗನ್ವಿಲ್ಲಾ ಗಿಡಗಳನ್ನು 60 ಸಾವಿರ ಖರ್ಚು ಮಾಡಿ ನೆಡಿಸಿದ್ದರು.
ಇದನ್ನು ನಗರ ಪಂಚಾಯತಿ ತೆರವು ಮಾಡಿತ್ತು. ತಾವೆಲ್ಲಾ ಸ್ವಚ್ಚ ಭಾರತ ಜಾಗೃತಿ ಅಭಿಯಾನದಲ್ಲಿ ತೊಡಗಿಕೊಂಡು, ಸುಂದರ ಹಸಿರಿನ ಪಟ್ಟಣವನ್ನಾಗಿ ರೂಪಿಸಲು ಪ್ರಯತ್ನಿಸುವಾಗ ನ.ಪಂ.ನ ಈ ರೀತಿಯ ವರ್ತನೆ ನೋವುಂಟು ಮಾಡಿದೆ. ಕನಿಷ್ಟ ದೂರವಾಣಿ ಕರೆ ಮಾಡಿಯಾದರೂ ಮಾತನಾಡಿದ್ದರೆ ತಾನಾಗಿಯೇ ಗಿಡ ತೆರವುಗೊಳಿಸುತ್ತಿದ್ದೆ. ಆದರೆ ನಡೆದುಕೊಂಡ ರೀತಿ ಬೇಸರ ತರಿಸಿದೆ. ಅಲ್ಲದೇ ನ.ಪಂ.ಕಚೇರಿ ಆವರಣದಲ್ಲಿ ಸಾಕಷ್ಟು ಕಸದ ರಾಶಿ, ಗಿಡ ಪೊದೆಗಳು ತುಂಬಿ ತನ್ನ ಮನೆಗೆ ತೊಂದರೆಯುಂಟಾಗುವ ಬಗ್ಗೆ ವಿನಂತಿಸಿದ್ದರೂ ಸ್ಪಂದನೆ ಕೂಡಾ ದೊರೆತಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಗಂಟೆಗೂ ಹೆಚ್ಚು ಸಮಯ ಕಾದರು
ರಾಜೀನಾಮೆ ಪತ್ರ ನೀಡಲು ಬಂದ ನಿಯೋಗ ರಾಜಿನಾಮೆ ಪತ್ರ ನೀಡಲು ಒಂದೂವರೆ ಗಂಟೆಗೂ ಹೆಚ್ಚು ಕಾಲ ಕಾಯಬೇಕಾಗಿ ಬಂತು. ನಿಯೋಗ ತೆರಳಿದ್ದ ವೇಳೆ ಅಧಿಕಾರಿ ಹೊರಹೋಗಿದ್ದರು. ಕಚೇರಿಗೆ ಆಗಮಿಸಿ ಪೋನಾಯಿಸಿದಾಗ ಕರ್ತವ್ಯ ನಿಮಿತ್ತ ಹೊರಹೋಗಿರುವುದಾಗಿ ತಿಳಿಸಿ, ಒಂದೂವರೆ ಗಂಟೆಗಳ ಕಾಲ ಕಳೆದು ಆಗಮಿಸಿದರು. ಬೆಳಗ್ಗೆ ಮುಖ್ಯಾಧಿಕಾರಿಗೆ ತಿಳಿಸಿದಾಗ 3.15ಕ್ಕೆ ಬರುವಂತೆ ತಿಳಿಸಿದ್ದರು, ಆದರೆ ನಿಗದಿತ ಸಮಯಕ್ಕೆ ಬಂದರೂ ಒಂದೂವರೆ ಗಂಟೆ ಕಾಯಬೇಕಾಗಿ ಬಂತು ಎಂದು ನಿಯೋಗದಲ್ಲಿದ್ದ ಪ್ರಮುಖರು ಹೇಳಿದರು.

See also  ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭವ್ಯ ಸುಳ್ಯ ಸಂಕಲ್ಪ ದಿನಾಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

180

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು