News Kannada
Saturday, April 01 2023

ಕರಾವಳಿ

ಪುತ್ತೂರು ಚಿಣ್ಣರ ಪಾರ್ಕ್‍ನಲ್ಲಿ ಅಕ್ಕಸಾಲಿಗನ ಶವ ಪತ್ತೆ

Photo Credit :

ಪುತ್ತೂರು ಚಿಣ್ಣರ ಪಾರ್ಕ್‍ನಲ್ಲಿ ಅಕ್ಕಸಾಲಿಗನ ಶವ ಪತ್ತೆ

ಪುತ್ತೂರು: ಇಲ್ಲಿನ ಸರಕಾರಿ ಆಸ್ಪತ್ರೆಯ ರಸ್ತೆಯಲ್ಲಿರುವ ಚಿಣ್ಣರ ಪಾರ್ಕ್‍ನ ರಂಗಮಂದಿರ ವೇದಿಕೆಯಲ್ಲಿ ಅಕ್ಕಸಾಲಿಗರೋರ್ವರ ಶವ ಪತ್ತೆಯಾದ ಘಟನೆ ಸೆ.4ರಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಸವಣೂರು ಪುಣ್ಚಪ್ಪಾಡಿಯ ಕಲಾಯಿತ್ತಡ್ಕ ದಿ. ನಾರಾಯಣ ಮತ್ತು ದಿ.ಸತ್ಯವತಿ ಎಂಬವರ ಪುತ್ರ ಸುಧಾಕರ ಆಚಾರ್ಯ(35) ಅವರು ಮೃತಪಟ್ಟವರು. ಸುಧಾಕರ್ ಆಚಾರ್ಯರವರು ಹಲವು ವರ್ಷಗಳ ಹಿಂದೆ ಕೋರ್ಟು ರಸ್ತೆಯಲ್ಲಿನ ಕಟ್ಟಡವೊಂದರಲ್ಲಿ ಅಕ್ಕಸಾಲಿಗನಾಗಿ ಚಿನ್ನದ ಕಸೂತಿ ಕೆಲಸ ಮಾಡುತ್ತಿದ್ದು, ಬಳಿಕದ ದಿನಗಳಲ್ಲಿ ಆತನ ತಂದೆ ತಾಯಿ ಮೃತಪಟ್ಟ ಬಳಿಕ ಚಿನ್ನದ ಕಸೂತಿಯ ವೃತ್ತಿಯನ್ನು ಬಿಟ್ಟು ಮದ್ಯವ್ಯಸನಿಯಾಗಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಸರಿಯಾಗಿ ಮನೆಗೆ ಹೋಗುತ್ತಿರಲಿಲ್ಲ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

ಅತಿಯಾದ ಮದ್ಯಸೇವನೆಯಿಂದಾಗಿ ಅವರು ಮೃತಪಟ್ಟಿರಬಹುದೆಂದು ಮೃತರ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಹಿತಿ ಪಡೆದು ತೆರಳಿದ್ದಾರೆ. ಮೃತ ದೇಹವನ್ನು ಮೃತ ಸುಧಾಕರ್ ಆಚಾರ್ಯರವರ ದೊಡ್ಡಪ್ಪ ವೀರಪ್ಪ ಆಚಾರ್ಯ ಮತ್ತು ಸಬಂಧಿಕರು ಇಲ್ಲಿನ ಚಿಕ್ಕಪುತ್ತೂರಿನಲ್ಲಿರುವ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಸಿದ್ದಾರೆ.

See also  ಶಿಕ್ಷಕ ಸ್ನೇಹಿ ವರ್ಗಾವಣೆ ಕಾಯ್ದೆ ಅನುಷ್ಠಾನಕ್ಕೆ ಸರ್ಕಾರ ಬದ್ಧ: ಸುರೇಶ್ ಕುಮಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

185

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು