News Kannada
Wednesday, March 29 2023

ಕರಾವಳಿ

ಮಹಾಮಸ್ತಕಾಭಿಷೇಕ ಮಹೋತ್ಸವ: ‘ಕೇವಲಿ’ ಸ್ಮರಣ ಸಂಚಿಕೆ ಬಿಡುಗಡೆ

Photo Credit :

ಮಹಾಮಸ್ತಕಾಭಿಷೇಕ ಮಹೋತ್ಸವ: ‘ಕೇವಲಿ’ ಸ್ಮರಣ ಸಂಚಿಕೆ ಬಿಡುಗಡೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದÀ ಜನಕಲ್ಯಾಣ ಕಾರ್ಯಕ್ರಮದಲ್ಲಿ ‘ಕೇವಲಿ’ ಎಂಬ ಸ್ಮರಣ ಸಂಚಿಕೆಯನ್ನು ಕೇಂದ್ರ ಸರಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ ಸಚಿವ ಡಿ.ವಿ.ಸದಾನಂದ ಗೌಡ ಶನಿವಾರ ಲೋಕಾರ್ಪಣೆಗೊಳಿಸಿದರು.

ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೆಂದ್ರ ಹೆಗ್ಗಡೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಉಪಸ್ಥಿತರಿದ್ದರು.

ಧರ್ಮಸ್ಥಳದ ಭಗವಾನ್ ಬಾಹುಬಲಿಗೆ ನಡೆಯಲಿರುವ ನಾಲ್ಕನೇ ಮಹಾಮಸ್ತಕಾಭಿಷೇಕ ಸಂದರ್ಭವನ್ನು ಸ್ಮರಣೀಯವಾಗಿರಿಸಲು ‘ಕೇವಲಿ’ ಸಂಚಿಕೆಯನ್ನು ರೂಪಿಸಲಾಗಿದೆ. ಸ್ಮರಣ ಸಂಚಿಕೆಯು ಭಗವಾನ್ ಬಾಹುಬಲಿಗೆ ಸಂಬಂಧಿಸಿದ ಲೇಖನಗಳು, ಮಹಾಮಸ್ತಕಾಭಿಷೇಕದ ವಿಶೇಷತೆ ಹಾಗೂ ಹಿನ್ನೆಲೆ ಮತ್ತು ಸಂದರ್ಶನ ಆಧಾರಿತ ಬರಹಗಳನ್ನು ಒಳಗೊಂಡಿದೆ. ಪುರಾಣ, ಶಿಲ್ಪಕಲೆ, ಸಾಹಿತ್ಯ ಜಾನಪದ ಹೀಗೆ ಹಲವಾರು ಪ್ರಕಾರಗಳಲ್ಲಿ ಬಾಹುಬಲಿಯನ್ನು ಬಿಂಬಿಸಿರುವ ಕುರಿತ ಬರಹಗಳು ಈ ಸ್ಮರಣ ಸಂಚಿಕೆಯಲ್ಲಿದೆ. ಜೊತೆಗೆ ಬಾಹುಬಲಿಗೆ ಸಂಬಂಧಿಸಿದ ಕವಿತೆಗಳನ್ನು ಒಳಗೊಂಡಿದೆ.

ಬಾಹುಬಲಿ ಸ್ವಾಮಿಯ ಸಂದೇಶ ಹಾಗೂ ವ್ಯಕ್ತಿತ್ವ, ಕವಿಗಳು ಹಾಗೂ ಸಾಹಿತಿಗಳು ಕಂಡಂತೆ ಬಾಹುಬಲಿ, ಜೈನ ಸಂಪ್ರದಾಯದಲ್ಲಿ ಮಸ್ತಕಾಭಿಷೇಕದ ಮಹತ್ವ, ಕರ್ನಾಟಕದಲ್ಲಿನ ಬಾಹುಬಲಿ ಶಿಲ್ಪಗಳು, ಪ್ರತಿಮೆಗಳು ಮತ್ತು ವರ್ಣ ಚಿತ್ರಗಳು, ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದ ವೈಶಿಷ್ಟ್ಯಗಳು ಹಾಗೂ ಧರ್ಮಸ್ಥಳದ ಕಲ್ಯಾಣ ಯೋಜನೆಗಳ ಚಿತ್ರಣವು ಸ್ಮರಣ ಸಂಚಿಕೆಯಲ್ಲಿದೆ. ಬಾಹುಬಲಿಯ ಕುರಿತು ಸಮಗ್ರ ಅಧ್ಯಯನಕ್ಕೆ ಸಹಾಯಕವಾಗುವ ಬರಹಗಳು ‘ಕೇವಲಿ’ಯಲ್ಲಿದೆ. ಪ್ರಸ್ತುತ ಕಾಲಕ್ಕೆ ಅನುಗುಣವಾಗುವಂತೆ ಬಾಹುಬಲಿಯ ವ್ಯಕ್ತಿತ್ವವನ್ನು ಚಿಂತಕರು ಬರಹ ರೂಪಕ್ಕಿಳಿಸಿದ್ದಾರೆ.

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ ಹೆಗ್ಗಡೆ ಅವರ ಸಂದರ್ಶನ ಆಧಾರಿತ ಬರಹಗಳನ್ನೂ ಈ ಸಂಚಿಕೆ ಒಳಗೊಂಡಿದೆ. ಡಿ. ಸುರೇಂದ್ರ ಕುಮಾರ್ ಪ್ರಧಾನ ಸಂಪಾದಕರಾಗಿ, ಡಾ. ಬಿ. ಯಶೋವರ್ಮ ಸಂಪಾದಕರಾಗಿ, ಡಾ. ಬಿ. ಪಿ. ಸಂಪತ್ ಕುಮಾರ್ ಹಾಗೂ ಡಾ. ಹಳೆಮನೆ ರಾಜಶೇಖರ ಅವರು ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.

 

See also  ತೊಕ್ಕೊಟ್ಟು: ಟಯರ್ ಅಂಗಡಿ ಬೆಂಕಿಗೆ ಆಹುತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು