News Kannada
Tuesday, March 28 2023

ಕರಾವಳಿ

ಮಿತ್ರಬಳಗ ಕಾಯರ್ತೋಡಿ ವತಿಯಿಂದ ಬಲಿಯೇಂದ್ರ ಅಲಂಕಾರ ಸ್ಪರ್ಧೆ

Photo Credit :

ಮಿತ್ರಬಳಗ ಕಾಯರ್ತೋಡಿ ವತಿಯಿಂದ ಬಲಿಯೇಂದ್ರ ಅಲಂಕಾರ ಸ್ಪರ್ಧೆ

ಸುಳ್ಯ: ದೀಪಾವಳಿ ಹಬ್ಬದ ಪ್ರಯುಕ್ತ ಸುಳ್ಯದ ಮಿತ್ರ ಬಳಗ ಕಾಯರ್ತೋಡಿ ವತಿಯಿಂದ ಬಲಿಯೇಂದ್ರ ಅಲಂಕಾರ ಸ್ಪರ್ಧೆ ಏರ್ಪಡಿಸಲಾಯಿತು. 

ಮನೆಯ ಮುಂಭಾಗದಲ್ಲಿ ಬಲಿಯೇಂದ್ರ ಹಾಕಿ ಪೂಜೆ ನಡೆಸುವುದು ದೀಪಾವಳಿ ಹಬ್ಬದ ಪ್ರಮುಖ ಆಚರಣೆಗಳಲ್ಲೊಂದು. ಮನೆಯ ಮುಂಭಾಗದಲ್ಲಿ ಹಾಕುವ ಬಲಿಯೇಂದ್ರವನ್ನು  ಹೂವು, ಕಾಯಿ, ಬಳ್ಳಿ ಮತ್ತಿತರ ವಸ್ತುಗಳಿಂದ ಮನಮೋಹಕವಾಗಿ ಅಲಂಕರಿಸಲಾಗುತ್ತದೆ. ಅತ್ಯಂತ  ಆಕರ್ಷಕವಾಗಿ ಅಲಂಕರಿಸಿದ ಬಲಿಯೇಂದ್ರಕ್ಕೆ ಬಹುಮಾನ ನೀಡಲಾಗುತ್ತದೆ.

 ಮಿತ್ರ ಬಳಗದ ಸದಸ್ಯರು  ಮನೆ ಮನೆ ತೆರಳಿ ಬಲಿಯೇಂದ್ರಕ್ಕೆ ಅಂಕ ನೀಡುತ್ತಾರೆ. ಅತೀ ಹೆಚ್ಚು ಅಂಕ ಗಳಿಸಿದ ಬಲಿಯೇಂದ್ರವನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗುತ್ತದೆ. ಆಕರ್ಷಕವಾಗಿ ಅಲಂಕರಿಸಿದ  ಗೋವಿಂದ ನಾಯ್ಕ ದುಗಲಡ್ಕ ಇವರ ಮನೆಯ ಬಲಿಯೇಂದ್ರ ಪ್ರಥಮ ಬಹುಮಾನ ಪಡೆದುಕೊಂಡಿತು. ಕಾಯರ್ತೋಡಿಯ ಪುಷ್ಪಾವತಿ ಆಚಾರ್ಯ ಮತ್ತು ಮನೆಯವರ ಬಲಿಯೇಂದ್ರ ಎರಡನೇ ಬಹುಮಾನ ಮತ್ತು ಶಿವರಾಮ ನಾಯ್ಕ ನೆಲ್ಲಿಬಂಗಾರಡ್ಕ ಕೇರ್ಪಳ ಇವರ ಮನೆಯ ಬಲಿಯೇಂದ್ರ ತೃತೀಯ ಸ್ಥಾನ ಪಡೆದಿದೆ ಎಂದು ಮಿತ್ರ ಬಳಗದ ಪದಾಧಿಕಾರಿಗಳು ತಿಳಿಸಿದ್ದಾರೆ.

ಮಿತ್ರ ಬಳಗದ ವತಿಯಿಂದ ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಬಲಿಯೇಂದ್ರ ಅಲಂಕಾರ ಸ್ಪರ್ಧೆ, ಗೂಡು ದೀಪ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ.

See also  ಎ.1ರಂದು ಕಾಸರಗೋಡಿನಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಕಾರ್ಯಾರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

180

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು