News Kannada
Friday, March 24 2023

ಕರಾವಳಿ

ಪ್ರತಿನಿತ್ಯ 1 ಗಂಟೆ ಯೋಗಾಭ್ಯಾಸ ಮಾಡಬೇಕು: ಬಾಬಾ ರಾಮ್‌ದೇವ್

Photo Credit :

ಪ್ರತಿನಿತ್ಯ 1 ಗಂಟೆ ಯೋಗಾಭ್ಯಾಸ ಮಾಡಬೇಕು: ಬಾಬಾ ರಾಮ್‌ದೇವ್

ಬಂಟ್ವಾಳ: ಪ್ರತೀದಿನ ಒಂದು ಗಂಟೆ ಯೋಗಾಭ್ಯಾಸ ಮಾಡಬೇಕು. ಶರೀರ ಶಕ್ತವಾಗಿರಬೇಕು. ಜೀವನ ಪ್ರದರ್ಶನಕ್ಕಾಗಿಯಲ್ಲ. ಪ್ರಭುದರ್ಶನಕ್ಕಾಗಿ ಜೀವನ ಎಂಬ ಭಾವ ನಮ್ಮದಾಗಬೇಕು ಎಂದು ಪತಂಜಲಿ ಯೋಗ ಪೀಠದ ಯೋಗಗುರು ಶ್ರೀ ಬಾಬಾ ರಾಮ್‌ದೇವ್ ಹೇಳಿದರು.

ಅವರು ಬುಧವಾರ ವಿಟ್ಲಪಡ್ನೂರು ಗ್ರಾಮದ ಮೂರುಕಜೆ ಮೈತ್ರೇಯೀ ಗುರುಕುಲಕ್ಕೆ ಭೇಟಿ ನೀಡಿ, ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸಿದರು.

ಸಂಸ್ಕೃತ ವ್ಯಾಕರಣದ ಮೂಲ ಗ್ರಂಥ ಅಭ್ಯಸಿಸಬೇಕು. ಬೌದ್ಧಿಕ ವಿಕಾಸದ ಜತೆ ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮದ ವಿಕಾಸವಾಗಬೇಕು. ಮನಸ್ಸಿನಲ್ಲಿ ದೃಢ ಸಂಕಲ್ಪವಿರಬೇಕು. ಗುರುಕುಲ ವಿಶ್ವವಿದ್ಯಾನಿಲಯಕ್ಕೆ ಸಹಕಾರವಿದೆ ಎಂದು ಹೇಳಿದರು.ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿಯರು ಶಾಸ್ತ್ರಾಧ್ಯಯನ ಮಾಡಿ, ಪತಂಜಲಿ ಯೋಗ ಪೀಠದಲ್ಲಿ ಸಮರ್ಪಣೆ ಮಾಡಿದಲ್ಲಿ ಪುರಸ್ಕರಿಸಲಾಗುವುದು ಎಂದವರು ಹೇಳಿದರು.

ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ಮೈತ್ರೇಯೀ ಗುರುಕುಲದ ಗೌರವಾಧ್ಯಕ್ಷ ಎನ್.ಕುಮಾರ್ ಮತ್ತು ಅಜೇಯ ವಿಶ್ವಸ್ಥ ಮಂಡಳಿ ಸದಸ್ಯ ಪಿ.ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.

See also  ಬೈಕ್ ಸಹಿತ ರಸ್ತೆ ಬದಿಯಲ್ಲಿದ್ದ ಮನೆಗೆ ಅಪ್ಪಳಿಸಿದ ಬೈಕ್ ಸವಾರನ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು