News Kannada
Sunday, April 02 2023

ಕರಾವಳಿ

ವರ್ಷಗಳು ಕಳೆದರೂ ಸಿಗದ ನಕ್ಷೆ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಉಮಾನಾಥ್

Photo Credit :

ವರ್ಷಗಳು ಕಳೆದರೂ ಸಿಗದ ನಕ್ಷೆ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಉಮಾನಾಥ್

ಮೂಡುಬಿದಿರೆ: ಎರಡು-ಮೂರು ವರ್ಷಗಳಾದರೂ ಭೂನಕ್ಷೆಗಳು, ದಾಖಲೆಗಳು ಅರ್ಜಿದಾರರಿಗೆ ಸಿಗದಿರುವ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮೂಡುಬಿದಿರೆ ತಾಲೂಕು ಕಚೇರಿಗೆ ಭೇಟಿ ನೀಡಿ, ಕಂದಾಯ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದರು.

ಕಡತಗಳನ್ನು ಮೂರು ತಿಂಗಳೊಳಗಾಗಿ ಇತ್ಯರ್ಥಗೊಳಿಸಿ, ಜನರಿಗೆ ಬೇಕಾದ ನಕ್ಷೆ, ದಾಖಲೆಗಳನ್ನು ಕಂದಾಯ ಅಧಿಕಾರಿಗಳು ಮಾಡಿಕೊಡಬೇಕು. ಆದರೆ ನಿಮ್ಮ ಬಳಿ ಬಂದವರಿಗೆ ಕಳೆದ ಮೂರು ವರ್ಷಗಳಿಂದ ನಕ್ಷೆ ಸಹಿತ ದಾಖಲೆಗಳನ್ನು ನೀಡದೆ ಯಾಕೆ ಸತಾಯಿಸುತ್ತಿದ್ದೀರಿ.

ದಾಖಲೆಗಳನ್ನು ಜನರ ಬಳಿ ಬೇಡಿಕೆ ಇಟ್ಟಿರುವ ಆಡಿಯೋ ರೆಕಾರ್ಡ್ ನನ್ನ ಬಳಿ ಇದೆ. ವಯೋವೃದ್ಧರು ಕೂಡ ಬಂದು ನನ್ನ ಬಳಿ ಇಲ್ಲಿಯ ಅವ್ಯವಸ್ಥೆ, ಸತಾಯಿಸುವ ರೀತಿಯ ಬಗ್ಗೆ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಮುಂದೆ ಸೂಕ್ತ ರೀತಿಯಲ್ಲಿ ಜನರ ಕೆಲಸ ಮಾಡದಿದಲ್ಲಿ ಕ್ರಮ ಕೈಗೊಳ್ಳುತ್ತೇನೆ. ಮುಂದಿನ 15 ದಿನಗಳೊಳಗಡೆ ಹಳೇ ಬಾಕಿರುವ ಕಡತಗಳನ್ನು ಇತ್ಯರ್ಥ ಮಾಡಿಕೊಡಬೇಕು ಎಂದು ಕಂದಾಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

See also  ಬಿ.ಸಿ. ರೋಡ್ ನಲ್ಲಿ ಬಸ್ ಸಂಚಾರ ನಿರ್ಬಂಧದಿಂದ ಸಾರ್ವಜನಿಕರಿಗೆ ತೊಂದರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

193
Deevith S K

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು