ಮಂಗಳೂರು: ಬೆಳ್ತಂಗಡಿ ಉಜಿರೆಯಿಂದ ಗುರುವಾರ ಸಂಜೆ ಅಪರಿಹರಿಸಲಾಗಿದ್ದ 8 ವರ್ಷದ ಬಾಲಕನ ಬಿಡುಗಡೆಗೆ ಇದೀಗ ₹17 ಕೋಟಿ ನೀಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಿನ್ನೆ ಸಂಜೆ 8 ವರ್ಷದ ಮಗು ಮನೆಯಂಗಳದಲ್ಲಿ ಆಟವಾಡುತ್ತಿದ್ದ ಸಮಯದಲ್ಲಿ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮಗುವನ್ನ ಅಪಹರಣ ಮಾಡಿದ್ದರು.
ಉಜಿರೆಯ ಬಿಜೋಯ್ ಏಜೆನ್ಸಿಸ್ ಮಾಲೀಕ ಹಾಗೂ ಉದ್ಯಮಿ ಬಿಜೋಯ್ ಅವರ 8 ವರ್ಷದ ಅನುಭವ್ ಎಂಬಾತನೇ ಅಪಹರಣಗೊಂಡ ಬಾಲಕನಾಗಿದ್ದು, ಅಜ್ಜ ಎ.ಕೆ. ಶಿವನ್ ಎದುರೇ ಈ ಕೃತ್ಯ ನಡೆಸಲಾಗಿದೆ.
ಅಪಹರಣದ ಬಳಿಕ ಬಾಲಕನ ಮನೆಯವರನ್ನು ಫೋನ್ ಮೂಲಕ ಸಂಪರ್ಕಿಸಿದ ಅಪಹರಣಕಾರರು ₹17 ಕೋಟಿ ಕೋಟಿಯನ್ನು ಬಿಟ್ ಕಾಯಿನ್ ರೂಪದಲ್ಲಿ ನೀಡುವಂತೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ಕೆ. ಶಿವನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.