News Kannada
Wednesday, October 04 2023
ಕರಾವಳಿ

ಬೆಳ್ತಂಗಡಿ ಸುತ್ತಮುತ್ತ ಆಲಿಕಲ್ಲು ಸಹಿತ ಧಾರಾಕಾರ ಮಳೆ

Heavy rain warning issued for coastal areas
Photo Credit : News Kannada

ಬೆಳ್ತಂಗಡಿ:  ಬೆಳ್ತಂಗಡಿ ಪರಿಸರ ಸುತ್ತಮುತ್ತ ಆಲಿಕಲ್ಲುಸಹಿತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನ ಇದೀಗ ಮಳೆರಾಯನ ಆಗಮನದಿಂದ ಕೊಂಚ ನಿರಾಳರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಉಜಿರೆ, ಮುಂಡಾಜೆ, ಧರ್ಮಸ್ಥಳ, ಕೊಕ್ಕಡ, ನಾರಾವಿ, ಬೆಳ್ತಂಗಡಿ, ಚಾರ್ಮಾಡಿ, ಸವಣಾಲು, ಕಡಿರುದ್ಯಾವರ ಸಹಿತ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆ ಸುರಿದಿದೆ ಎಂದು ತಿಳಿದು ಬಂದಿದೆ. ಬಹುತೇಕ ಕಡೆಗಳಲ್ಲಿ ಆಲಿಕಲ್ಲು ಮಳೆಯಾಗಿರುವುದರ ಬಗ್ಗೆ ವರದಿಯಾಗಿದೆ.

ನಿನ್ನೆ ರಾತ್ರಿಯಿಂದಲೇ ಮಳೆ ಮುನ್ಸೂಚನೆ ನೀಡಿದ್ದು, ಗುಡುಗು ಸಹಿತ ಹನಿ ಮಳೆಯಾಗಿತ್ತು.ಇನ್ನು ಸುಳ್ಯ ತಾಲೂಕಿನಲ್ಲಿಯೂ ಹನಿಮಳೆಯಾದ ಬಗ್ಗೆ ವರದಿಯಾಗಿದೆ. ಬಿಸಿಲ ತಾಪಮಾನದಿಂದ ಕೃಷಿ ತೋಟಗಳಿಗೆ ನೀರಿಲ್ಲದೇ ರೈತರು ಕಂಗಾಲಾಗಿದ್ದರು. ಇದೀಗ ಮಳೆಯಿಂದಾಗಿ ವಾತಾವರಣ ತಂಪೇರಿದೆ. ಮಳೆ ಪರಿಣಾಮ ಕೆಲವೆಡೆ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ ಎಂದು ತಿಳಿದು ಬಂದಿದೆ.

ಗುರುವಾರ ಮಧ್ಯರಾತ್ರಿಯೇ ಮಳೆ ಮುನ್ಸೂಚನೆ ನೀಡಿದ್ದು ಗುಡುಗು ಸಹಿತ ಹನಿ ಮಳೆಯಾಗಿತ್ತು. ಇದೀಗ ಶುಕ್ರವಾರ ಗಾಳಿಯೊಂದಿಗೆ ಮಳೆ ಆರಂಭಗೊಂಡು ರಸ್ತೆ,‌ ಚರಂಡಿಗಳಲ್ಲಿ ನೀರು ಹರಿಯುವ ಮಟ್ಟಿಗೆ ಮಳೆಯಾಗಿದೆ. ಬೇಸಗೆ ಬಿಸಿಯಿಂದ ಅಂತರ್ಜಲ ಬರಿದಾಗಿ ಕೊಳವೆಬಾವಿಯಲ್ಲಿ ನೀರಿಲ್ಲದೆ ಕೃಷಿಕರು ಕಂಗೆಟ್ಟಿದ್ದರು. ಇದೀಗ ಅರ್ಧ ತಾಸು ಮಳೆಯಿಂದಾಗಿ ವಾತಾವರಣ ತಂಪೇರಿದೆ. ಬಹುತೇಕ ಕಡೆ ಆಲಿಕಲ್ಲು ಮಳೆಯಾಗಿದೆ.

ಸಿಡಿಲಿಗೆ ಹಲವರ ಮನೆಗಳ ವಿದ್ಯುತ್ ಉಪಕರಣಗಳಿಗು ಹಾನಿಯಾಗಿದೆ. ಮಳೆ ಆರಂಭ ಆಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

ವಿದ್ಯುತ್ ಕಂಬ ಮುರಿತ
ಮಳೆಯೊಂದಿಗೆ ಬೀಸಿದ ಗಾಳಿಗೆ ಉಜಿರೆ ಹಾಗೂ ಮುಂಡಾಜೆ ಯಲ್ಲಿ 25ಕ್ಕಿಂತ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದಾಗಿ ತಿಳಿದು ಬಂದಿದೆ.ಅಲ್ಲದೆ ವಿದ್ಯುತ್ ಲೈನ್ ಮೇಲೆ ಮರದ ಗೆಲ್ಲುಗಳು ಮುರಿದು ಬಿದ್ದಿದ್ದು ವಿದ್ಯುತ್ ಪೂರೈಕೆಗೆ ಅಡಚಣೆ ಉಂಟಾಗಿದೆ.

ಕಡಿರುದ್ಯಾವರ ಗ್ರಾಮದ ಗಜಂತೋಡಿ ಸಮೀಪ ಬಿಜು ತೋಮಸ್ ಎಂಬವರ ಸುಮಾರು ಒಂದು ಸಾವಿರದಷ್ಟು ನೇಂದ್ರ ಬಾಳೆಗಿಡಗಳು ಶುಕ್ರವಾರ ಸಂಜೆ ಮಳೆಯ ಜತೆ ಬೀಸಿದ ಭಾರಿ ಗಾಳಿಗೆ ಧರಾಶಾಯಿಯಾಗಿವೆ.

See also  ಸಭೆಗೂ ಮುನ್ನ ಕೃಷ್ಣ ದರ್ಶನ ಪಡೆದ ಸಿಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು