ಉಡುಪಿ: ಕಾಂಗ್ರೆಸ್ ಸರಕಾರ ರೈತರು ಮತ್ತು ಹೈನುಗಾರರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಮಾಡಲಿ. ಅದುಬಿಟ್ಟು ಗೋಹತ್ಯೆ ನಿಷೇಧ ಕಾಯಿದೆಯಲ್ಲಿ ಬದಲಾವಣೆ ತಂದರೆ ಬಿಜೆಪಿ ಪಕ್ಷ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರ ಗೋವುಗಳ ಸಂರಕ್ಷಣೆಗಾಗಿ ಮತ್ತು ಕೃಷಿಕರ ಅನುಕೂಲಕ್ಕಾಗಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದಿದೆ. ಆದರೆ ಪಶುಸಂಗೋಪನೆ ಸಚಿವರ ಹೇಳಿಕೆ ಆಶ್ಚರ್ಯ ತಂದಿದೆ. ಮುಖ್ಯಮಂತ್ರಿಗಳು ತಮ್ಮ ಸಚಿವರನ್ನು ಕರೆದು ಈ ಬಗ್ಗೆ ಮಾತಾಡಬೇಕು ಎಂದರು.
ರಾಜ್ಯದ ಜನರು ನಿಮಗೆ ಮತ ಹಾಕಿರುವುದು ನೀವು ಕೊಟ್ಟ ಆಶ್ವಾಸನೆಗಳಿಗಾಗಿ, ಅದನ್ನು ಈಡೇರಿಸಲು ಪ್ರಯತ್ನಮಾಡಿ. ಅದು ಬಿಟ್ಟು ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿ ಈ ರೀತಿಯ ಹೇಳಿಕೆ ನೀಡಬೇಡಿ. ಇದರಿಂದಾಗಿ ಗೋವುಗಳ ಮಾರಣಹೋಮವಾಗುತ್ತದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಗೋಹತ್ಯೆ ನಿಷೇಧ ಕಾಯಿದೆ ಬದಲಾಯಿಸಿದರೆ ಒಳಗೆ, ಹೊರಗೆ ಹೋರಾಟ: ನಗರದಲ್ಲಿ ಮಾಜಿ ಸಚಿವ ಕೋಟ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.