News Karnataka Kannada
Friday, April 26 2024
ಕರಾವಳಿ

ಗೋಹತ್ಯೆ ನಿಷೇಧ ಕಾಯಿದೆ ಬದಲಾಯಿಸಿದರೆ ಒಳಗೆ, ಹೊರಗೆ ಹೋರಾಟ: ನಗರದಲ್ಲಿ ಮಾಜಿ ಸಚಿವ ಕೋಟ

If the cow slaughter ban is changed, fight inside, outside: Ex-minister Kota in the city
Photo Credit :

ಉಡುಪಿ: ಕಾಂಗ್ರೆಸ್ ಸರಕಾರ ರೈತರು ಮತ್ತು ಹೈನುಗಾರರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಮಾಡಲಿ. ಅದುಬಿಟ್ಟು ಗೋಹತ್ಯೆ ನಿಷೇಧ ಕಾಯಿದೆಯಲ್ಲಿ ಬದಲಾವಣೆ ತಂದರೆ ಬಿಜೆಪಿ ಪಕ್ಷ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರ ಗೋವುಗಳ ಸಂರಕ್ಷಣೆಗಾಗಿ ಮತ್ತು ಕೃಷಿಕರ ಅನುಕೂಲಕ್ಕಾಗಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದಿದೆ. ಆದರೆ ಪಶುಸಂಗೋಪನೆ ಸಚಿವರ ಹೇಳಿಕೆ ಆಶ್ಚರ್ಯ ತಂದಿದೆ. ಮುಖ್ಯಮಂತ್ರಿಗಳು ತಮ್ಮ ಸಚಿವರನ್ನು ಕರೆದು ಈ ಬಗ್ಗೆ ಮಾತಾಡಬೇಕು ಎಂದರು.
ರಾಜ್ಯದ ಜನರು ನಿಮಗೆ ಮತ ಹಾಕಿರುವುದು ನೀವು ಕೊಟ್ಟ ಆಶ್ವಾಸನೆಗಳಿಗಾಗಿ, ಅದನ್ನು ಈಡೇರಿಸಲು ಪ್ರಯತ್ನಮಾಡಿ. ಅದು ಬಿಟ್ಟು ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿ ಈ ರೀತಿಯ ಹೇಳಿಕೆ ನೀಡಬೇಡಿ. ಇದರಿಂದಾಗಿ ಗೋವುಗಳ ಮಾರಣಹೋಮವಾಗುತ್ತದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು