News Kannada
Monday, March 20 2023

ಕಾಸರಗೋಡು

ಅನುಮಾಸ್ಪದವಾಗಿ ಮೃತಪಟ್ಟ ಗೃಹಿಣಿ

Photo Credit :
ಕಾಸರಗೋಡು :ಗೃಹಿಣಿಯೋರ್ವರು ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಆದೂರು ಠಾಣಾ ವ್ಯಾಪ್ತಿಯ ನಾರಂಪಾಡಿಯಲ್ಲಿ ನಡೆದಿದ್ದು , ಪತಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ನಾರಂಪಾಡಿ  ಕಲ್ಲಂಕೂಡ್ಲುವಿನ ಅನಿತಾ ( ೪೫ ) ಮೃತಪಟ್ಟವರು. ಪತಿ ಕಣ್ಣನ್ ನಂಬೂದಿರಿ ನಾಪತ್ತೆಯಾಗಿದ್ದಾರೆ. ಮನೆ ಬಳಿಯ ಶೆಡ್ ನಲ್ಲಿ ಅನಿತಾಳ ನೇಣು  ಬಿಗಿದ ಸ್ಥಿಯಲ್ಲಿ ಪತ್ತೆಯಾಗಿದ್ದಾರೆ. ,ಮನೆಯಲ್ಲಿದ್ದ  ೧೦ ವರ್ಷದ ಪುತ್ರ ಇದನ್ನು ಗಮನಿಸಿ ಪರಿಸರವಾಸಿಗಳು  ತಲಪಿದಾಗ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ .
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಆದೂರು ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು.ಮೂಲತಃ  ಕೊಟ್ಟಾಯಂಪಾಲ ನಿವಾಸಿಯಾಗಿರುವ ಕಣ್ಣನ್ ನಂಬೂದಿರಿ ಕುಟುಂಬ  ಒಂದು ವರ್ಷದ ಹಿಂದೆ ಕಾರಡ್ಕ ಕಲ್ಲಂಕೂಡ್ಲು ಎಂಬಲ್ಲಿ ಸ್ಥಳ ಖರೀದಿಸಿ ವಾಸವಾಗಿದ್ದಾರೆ. ಇಲ್ಲಿದ್ದ ಹಳೆ ಮನೆಯನ್ನು ಕೆಡವಿ  ಹೊಸ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿತ್ತು . ಇದರ ಪಕ್ಕದಲ್ಲೇ ಎರಡು ಕೊನೆಯ ಸಣ್ಣ ಶೆಡ್ ನಿರ್ಮಿಸಿ ಅದರಲ್ಲಿ ವಾಸವಾಗಲಿದ್ದರು.
ಕಣ್ಣನ್ ನಂಬೂದಿರಿ ಮಂತ್ರವಾದಿಯಾಗಿದ್ದು , ಬುಧವಾರ ದಂದು  ಮನೆಯಿಂದ ತೆರಳಿದವರು ನಾಪತ್ತೆಯಾಗಿದ್ದಾರೆ. ಇವರ  ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಎನ್ನಲಾಗಿದೆ .
ಅನಿತಾ ವಯನಾಡು ಮೂಲದವರಾಗಿದ್ದು ,ಮನೆಯವರಿಗೆ ಮಾಹಿತಿ ನೀಡಲಾಗಿದೆ ಅವರು ತಲಪಿದ ಬಳಿಕವಷ್ಟೇ ಮರಣೋತ್ತರ ಪರೀ ಕ್ಷೆ  ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ . ನಾಪತ್ತೆಯಾದ ಕಣ್ಣನ್ ನಂಬೂದಿರಿ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
See also  ಚಿನ್ನದ ಅಂಗಡಿಗೆ ಕನ್ನ ಹಾಕಿದ್ದವರು ಪೊಲೀಸ್ ಬಲೆಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು