News Kannada
Thursday, September 28 2023
ಕಾಸರಗೋಡು

ಕಾಸರಗೋಡು: ಕಿಞ್ಞಣ್ಣ ರೈಗಳ ಕಾವ್ಯ ಭಾಗದ ಚಿಂತನ-ಮಂಥನ ಸಂಸ್ಮರಣೆ ಕಾರ್ಯಕ್ರಮ

Chintana-Manthana commemoration programme of the poetry part of Kinnanna Rai
Photo Credit :

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ಮಂಜೇಶ್ವರ ಇವುಗಳ ಜಂಟಿ ಆಶ್ರಯದಲ್ಲಿ ನಾಡೋಜ ಪಂಪ ಪ್ರಶಸ್ತಿ ಪುರಸ್ಕೃತ, ಮಹಾಕವಿ, ಕನ್ನಡ ಹೋರಾಟಗಾರ,  ರಾಷ್ಟ್ರಪ್ರಶಸ್ತಿ ವಿಜೇತ,  ನಿವೃತ್ತ ಅಧ್ಯಾಪಕ,  ಬಹುಭಾಷಾ ವಿದ್ವಾಂಸ,  ಉದ್ದಾಮ ಸಾಹಿತಿ ಡಾ. ದಿ. ಕಿಞ್ಞಣ್ಣ ರೈಗಳ ಆಯ್ದ ಕಾವ್ಯ ಭಾಗದ ಚಿಂತನ-ಮಂಥನ ಮತ್ತು ಸಂಸ್ಮರಣೆ ಕಾರ್ಯಕ್ರಮವು 9/8 /2022ರ ಮಂಗಳವಾರ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಮಂಜೇಶ್ವರ ಇಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ರೈಗಳ ಆಯ್ದ ಕಾವ್ಯ ಭಾಗದ ಚಿಂತನ-ಮಂಥನ ಖ್ಯಾತ ಸಾಹಿತಿ ನಿವೃತ್ತ ಪ್ರಾಧ್ಯಾಪಕರಾದ ಡಾ. ಪ್ರಮೀಳಾ ಮಾಧವ. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಘಟಕದ ಅಧ್ಯಕ್ಷರಾದ ಎಸ್ ವಿ ಭಟ್ ವಹಿಸಲಿದ್ದಾರೆ. ಸಂಸ್ಮರಣೆ ಭಾಷಣವನ್ನು ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕರು ಹಾಗೂ ಖ್ಯಾತ ಸಾಹಿತಿಗಳಾದ ಡಾ ವಸಂತಕುಮಾರ್ ಪೆರ್ಲ ನಡೆಸಿಕೊಡಲಿದ್ದಾರೆ.

ಅವರ ಮಾರ್ಗದರ್ಶನದ ಸವಿನೆನಪುಗಳನ್ನು ನಿವೃತ್ತ ಪ್ರಾಧ್ಯಾಪಕರು ಹಾಗೂ ಗಾಯಕರಾದ ಡಾ ಪ್ರಸನ್ನ ರೈ ಹಾಗೂ ಶುಭಾಶಂಸನೆಯನ್ನು ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶಿವಶಂಕರ ಪಿ ನಡೆಸಿಕೊಡಲಿದ್ದಾರೆ.

ಈ ಸಂದರ್ಭದಲ್ಲಿ ನಿವೃತ್ತ ನೌಕಾಪಡೆಯ ಕಮಾಂಡರ್ ಹಾಗೂ ಸಮಾಜಸೇವಕರಾದ ಕೆ ವಿಜಯ್ ಕುಮಾರ್, ನಿವೃತ್ತ ಪ್ರಾಂಶುಪಾಲ ಹಾಗೂ ಸಂಘಟಕರಾದ ಶ್ರೀಮತಿ ಜಯಶೀಲ ಇವರಿಗೆ ಸನ್ಮಾನ ನಡೆಯಲಿದೆ.

ವಿದ್ಯಾರ್ಥಿಗಳಿಂದ ಭಾವಗಾನ ಸಿಂಚನ ಕಾರ್ಯಕ್ರಮ ನಡೆಯಲಿದೆ.

See also  ಉಡುಪಿ: ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ಶತಮಾನೋತ್ಸವ ಸಂಭ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು