ಕಾಸರಗೋಡು: ಕಯ್ಯಾರ್ ಪರಂಬಳ – ಜೋಡುಕಲ್ಲು ರಸ್ತೆ ಇದೀಗ ನರಕಸದ್ರಶ್ಯವಾಗಿ ಪರಿಣಮಿಸಿದ್ದು, ಸಂಚಾರವೇ ತೊಡಕಾಗಿ ಪರಿಣಮಿಸಿದೆ. ವರ್ಷಗಳಿಂದ ಈ ರಸ್ತೆಯೂ ಹೊಂಡಗಳಿಂದ ಸಂಚಾರ ಮಾತ್ರವಲ್ಲ ನಡೆದಾಡದ ಸ್ಥಿತಿಗೆ ತಲಪಿದೆ.
ಈ ರಸ್ತೆ ಮೂಲಕ ದಿನಂಪ್ರತಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಸಂಚಾರ ನಡೆಸುತ್ತಿದ್ದು , ಶಾಲೆ, ಚರ್ಚ್, ದೇವಸ್ಥಾನ , ಮಸೀದಿ ಸೇರಿದಂತೆ ಮೊದಲಾದ ಕೇಂದ್ರಗಳಿದ್ದು, ನೂರಾರು ವಾಹನಗಳು ಈ ರಸ್ತೆ ಮೂಲಕ ಸಂಚರಿಸುತ್ತಿದೆ.
ಆದರೆ ರಸ್ತೆಯ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಕಿಂಚಿತ್ತೂ ಗಮನ ಹರಿಸಿಲ್ಲ. ಇದೀಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಜಲ್ಲಿಗಳನ್ನು ಸಮೀಪದ ಕ್ರಷರ್ ನಿಂದ ಬ್ರಹತ್ ಗಾತ್ರದ ರಸ್ತೆಯಾಗಿ ಲಾರಿಗಳಲ್ಲಿ ಸಾಗಾಟ ಮಾಡಲಾಗುತ್ತಿದೆ . ಇಂತಹ ಲಾರಿಗಳು ನಿರಂತರ ಸಂಚಾರ ನಡೆಸುವುದರಿಂದ ರಸ್ತೆ ಬ್ರಹತ್ ಹೊಂಡಗಳಾಗಿ ಪರಿಣಮಿಸಿದೆ.
ರಸ್ತೆ ಸಂಚಾರ ಯೋಗ್ಯ ಗೊಳಿಸುವಂತೆ ಹಲವಾರು ಹೋರಾಟಗಳು ನಡೆದಿವೆ . ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ನೀಡಿದರೂ ಇನ್ನೂ ದುರಸ್ತಿಗೆ ಮುಂದಾಗಿಲ್ಲ. ರಸ್ತೆ ಅವ್ಯವಸ್ಥೆ ವಿರುದ್ಧ ಮತ್ತೆ ಪ್ರಟಿಭಟನೆ ನಡೆಸುವ ಬಗ್ಗೆ ನಾಗರಿಕರು ಚಿಂತನೆ ನಡೆಸಿದ್ದಾರೆ.