ಕಾಸರಗೋಡು: ಶೌಚಾಲಯದ ಗುಂಡಿಗೆ ಬಿದ್ದು ಎರಡು ವರ್ಷದ ಬಾಲಕ ಮೃತ ಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಉಪ್ಪಳ ದಲ್ಲಿ ನಡೆದಿದೆ. ಉಪ್ಪಳ ದ ಅಬ್ದುಲ್ ಸಮದ್ ರವರ ಪುತ್ರ ಅಬ್ದುಲ್ ರಹಮಾನ್ ಸಹದಾದ್ ಬ್ಲ್(2) ಮೃತ ಪಟ್ಟವನು. ಮನೆಯ ಹಿಂಬದಿಯಲ್ಲಿರುವ ಶೌಚಾಲಯ ಹೊಂಡಕ್ಕೆ ಬಿದ್ದು ಈ ದುರ್ಘಟನೆ ನಡೆದಿದೆ.
ಶೌಚಾಲಯದ ಒಂದು ಭಾಗ ಬಿರುಕು ಬಿಟ್ಟಿದ್ದು, ಬಾಲಕ ಅರಿಯದೆ ಇದರ ಮೇಲೆ ನಡೆದು ಕೊಂಡು ಹೋದಾಗ ಈ ದುರ್ಘಟನೆ ನಡೆದಿದೆ.
ಉಪ್ಪಳದಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಾಲಕ ನನ್ನು ಹೊರ ತೆಗೆದು ಉಪ್ಪಳದ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಮಂಜೇಶ್ವರ ಠಾಣಾ ಪೊಲೀಸರು ಮುಂದಿನ ಕ್ರಮ ತೆಗೆದು ಕೊಂಡಿದ್ದಾರೆ.