ಕಾಸರಗೋಡು: ಜನಸಾಮಾನ್ಯರ ಸಮಸ್ಯೆ ಪರಿಹರಿಸಲು ಸರಕಾರ ಬದ್ಧವಾಗಿದೆ ಎಂದು ಕೇರಳ ಲೋಕೋಪಯೋಗಿ ಸಚಿವ ಪಿ.ಎ.ಮುಹಮ್ಮದ್ ರಿಯಾಜ್ ಹೇಳಿದರು.
ಅವರು ಶನಿವಾರ ಕಾಸರಗೋಡು,ತಾಲೂಕು ಅದಾಲತ್ ಉದ್ಘಾಟಿಸಿ ಮಾತನಾಡುತ್ತಿದ್ದರು. ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಪರಿಹಾರ ಕಲ್ಪಿಸುವ ಉದ್ದೇಶ ರಾಜ್ಯ ಸರ್ಕಾರದ್ದಾಗಿದೆ. ಎಲ್ಲಾ ಇಲಾಖೆಗಳ ಸಚಿವರು ಹಂತ ಹಂತವಾಗಿ ಜನರಿಂದ ನೇರವಾಗಿ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಅದಾಲತ್ ಗಳನ್ನು ಆಯೋಜಿಸಲಾಗಿದೆ. ಇದರ ಜೊತೆಗೆ ಸಮಸ್ಯೆಗಳ ಇತ್ಯರ್ಥಕ್ಕ್ಕೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲೆಯಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಹೇಳಿದರು.
ಕಾಸರಗೋಡು ನಗರಸಭಾಂಗಣದಲ್ಲಿ ನಡೆದ ಅದಾಲತ್ ನ ಅಧ್ಯಕ್ಷತೆಯನ್ನು ಶಾಸಕ ಎನ್.ಎ ನೆಲ್ಲಿಕುನ್ನು ವಹಿಸಿದ್ದರು.
ಬಂದರು ಸಚಿವ ಸಚಿವ ಅಹ್ಮದ್ ದೇವರ್ ಕೋವಿಲ್ ಮಾತನಾಡಿದರು. ಶಾಸಕ ಸಿ.ಎಚ್.ಕುಂಞ೦ಬು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ.ಇಂ ಬಾಶೇಖರ್, ಕಾಸರಗೋಡು ಪುರಸಭೆ ಉಪಾಧ್ಯಕ್ಷೆ ಸಿ.ಎ.ಸೈಮಾ, ಕಾಡಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ,ಕುಂಬ್ಡಾಜೆ ಪಂಚಾಯತ್ ಅಧ್ಯಕ್ಷ ಪಿ.ಹಮೀದ್, ಕುತ್ತಿಕೋಲ್ ಪಂಚಾಯತ್ ಅಧ್ಯಕ್ಷ ಎಚ್.ಮುರಳಿ, ಮುಳಿಯಾರ್ ಪಂಚಾಯತ್ ಅಧ್ಯಕ್ಷ ಪಿ.ವಿ.ಮಿನಿ, ಬೇಡಡ್ಕ ಪಂಚಾಯತ್ ಅಧ್ಯಕ್ಷೆ ಎಂ.ಧನ್ಯ, ಕಾಸರಗೋಡು ಪುರಸಭೆ ಸದಸ್ಯೆ ವಿಮಲಾ ಶ್ರೀಧರ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಎಂ.ವಿ.ಬಾಲಕೃಷ್ಣನ್,ಟಿ.ಕೃಷ್ಣನ್, ಕರುಣ್ ತಾಪ, ಸಿ.ಎಂ.ಎ.ಜಲೀಲ್, ಬಿ.ಅಬ್ದುಲ್ ಗಫೂರ್, ನ್ಯಾಷನಲ್ ಅಬ್ದುಲ್ಲಾ ಮಾತನಾಡಿದರು. ಎಡಿಎಂ ಕೆ.ನವೀನ್ ಬಾಬು ಸ್ವಾಗತಿಸಿ, ಕಂದಾಯ ವಿಭಾಗಾಧಿಕಾರಿ ಅತುಲ್ ಎಸ್. ನಾಥ್ ವಂದಿಸಿದರು. ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಂದಾಯ ಉಪ ಅಧಿಕಾರಿಗಳು, ಜನಪ್ರತಿನಿಧಿಗಳು ಮೊದಲಾದ ವರು ಉಪಸ್ಥಿತರಿದ್ದರು.