ಬೆಳ್ತಂಗಡಿ : ಮಂಗಳವಾರ ಮಧ್ಯರಾತ್ರಿ ಬೈಕ್ – ಸ್ಕೂಟರ್ ನಡುವೆ ನಡೆದ ಅಪಘಾತದಿಂದ ಎರಡೂ ವಾಹನದ ಸವಾರರು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ಉಜಿರೆಯ ನಿಡಿಗಲ್ ಶಾಲೆಯ ಕ್ರಾಸ್ ಬಳಿ ನಡೆದಿದೆ.
ಮಂಗಳವಾರ ಮಧ್ಯರಾತ್ರಿ ಕಲ್ಮಂಜ ಗ್ರಾಮದ ನಿಡಿಗಲ್ ಶಾಲೆಯ ಕ್ರಾಸ್ ಬಳಿ ಚಾರ್ಮಾಡಿ ಕಡೆಯಿಂದ ಉಜಿರೆ ಕಡೆಗೆ ಪಲ್ಸರ್ ಬೈಕ್ ಹಾಗೂ ಉಜಿರೆಯಿಂದ ನೆರಿಯ ಕಡೆಗೆ ಹೋಗುತ್ತಿದ್ದ ಸ್ಕೂಟರ್ ನಡುವೆ ಅಪಘಾತ ನಡೆದಿದೆ.
ಅಪಘಾತದಲ್ಲಿ ಎರಡು ವಾಹನದ ಸವಾರರು ಗಂಭೀರ ಗಾಯಗೊಂಡಿದ್ದು ಸ್ಕೂಟರ್ ಸವಾರ ವೆನ್ಲಾಕ್ ಆಸ್ಪತ್ರೆಯಲ್ಲಿ ಹಾಗೂ ಬೈಕ್ ಸವಾರ ದೇವರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಲ್ಸರ್ ಬೈಕ್ ಸವಾರ ದಾವಣಗೆರೆ ನಿವಾಸಿ ಸವಾರ ಸಂತೋಷ್(32) ಮತ್ತು ಸಹಸವಾರ ಚಾರ್ಮಾಡಿ ಘಾಟ್ ಅಗಿ ಉಜಿರೆ ಕಡೆಗೆ ಬರುತ್ತಿದ್ದರು ಮತ್ತು ನೆರಿಯ ನಿವಾಸಿ ಸವಾರ ಗಾರೆ ಕೆಲಸ ಮಾಡುವ ನಿತೇಶ್(25) ಮತ್ತು ಸಹಸವಾರ ಹರೀಶ್(25) ಎಂಬವರು ಉಜಿರೆ ಕಡೆಯಿಂದ ನೆರಿಯ ಮನೆಯ ಕಡೆಗೆ ಹೋಗುತ್ತಿದ್ದಾಗ ಮಂಗಳವಾರ ಸುಮಾರು ರಾತ್ರಿ 12 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ.
ಸಹಸವಾರರಿಗೆಗೆ ಯಾವುದೇ ಗಾಯವಾಗದೆ ಅಪಾಯದಿಂದ ಪಾರಾಗಿದ್ದಾರೆ, ಅಪಘಾತದಿಂದ ಎರಡು ವಾಹನಗಳಿಗೆ ಹಾನಿಯಾಗಿದೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.