News Karnataka Kannada
Friday, April 19 2024
Cricket
ಮಂಗಳೂರು

ಉದಯಾಸ್ತಮಾನ ಕವಿ ನಮನ:ಗಮಕ ಕಲಾ ಆರಾಧನಾ

New Project 2021 10 25t090404.398
Photo Credit :

ಬೆಳ್ತಂಗಡಿ: ಸನಾತನ ಪರಂಪರೆಯ ಸಾಹಿತ್ಯಿಕ,ಸಾಂಸ್ಕೃತಿಕ ಪ್ರಕಾರಗಳಲ್ಲಿ ಗಮಕ ಶ್ರೀಮಂತ ಕಲೆಗಳಲ್ಲೊಂದು . .ಭಜನೆಯ ಪ್ರೇರಣೆಯಂತೆ ನೈತಿಕವಾಗಿ ಪರಿಣಾಮ ಬೀರಬಲ್ಲ ಶಕ್ತಿ ಗಮಕಕಲೆಗಿದೆ. ಯುವ ಪೀಳಿಗೆ ಆಸಕ್ತಿ ಬೆಳೆಸಿ ಅಭ್ಯಾಸ ಮಾಡುವ ಪ್ರಯತ್ನವಾಗಬೇಕು. ಗಮಕ ಕಲೆಗೆ ಗೌರವ, ಪ್ರಾತಿನಿಧ್ಯದ ಕೊರತೆಯಿದೆ. ಗಮಕ ಕಲೆಗೆ ಗೌರವದ ಸ್ಥಾನಮಾನ ದೊರಕಿಸಲು ಸರಕಾರದ ಗಮನ ಸೆಳೆಯಲು ಪ್ರಯತ್ನಿಸುವುದಾಗಿ ವಿ.ಪ. ಶಾಸಕ ಪ್ರತಾಪಸಿಂಹ ನಾಯಕ್ ನುಡಿದರು. ಅವರು ಅ 24. ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್(ರಿ),ದ .ಕ .ಜಿಲ್ಲಾ ಮತ್ತು ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ನಡೆದ “ಉದಯಾಸ್ತಮಾನ ಕವಿ ನಮನ:ಗಮಕ ಕಲಾ ಆರಾಧನಾ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಹಿಂದೆ ರಾಜಾಶ್ರಯದಿಂದ ಆಧ್ಯಾತ್ಮಿಕ ಕೇಂದ್ರಗಳಲ್ಲಿ ನಡೆದುಕೊಂಡು ಬರುತ್ತಿದ್ದ ಗಮಕ ಕಾರ್ಯಕ್ರಮಗಳಿಗೆ ಇಂದು ದೇವಸ್ಥಾನಗಳು ಆಶ್ರಯ ನೀಡಿ ಬೆಳೆಸಬೇಕಾಗಿದೆ..ಹಿರಿಯರ ಬಳುವಳಿಯಾಗಿ ಅಧ್ಯಾತ್ಮ ಜೀವನಕ್ಕೆ ಸರಿಯಾದ ದಾರಿ ತೋರಿ ,ಪರಂಪರೆಯ ವಾರಸುದಾರರಾಗಿ ಕಲೆಯನ್ನು ಉಳಿಸಿ,ಬೆಳೆಸುವ ಜವಾಬ್ದಾರಿ ನಮ್ಮ್ಮ ಮೇಲಿದೆ ಎಂದು ನುಡಿದರು. ಹಿರಿಯ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರೀ ಕವಿ ನಮನ ಸಲ್ಲಿಸಿ ಹಳೆಯ ಕಾವ್ಯಗಳು ಪಠ್ಯದಲ್ಲಿ ಬರುತ್ತಿಲ್ಲ . ತಾಳೆಗರಿ ಯಂತೆ ಕುಮಾರವ್ಯಾಸ,ಪುರಂದರದಾಸರಂತಹ ಕವಿಗಳ ಕೃತಿಗಳನ್ನು ರಕ್ಷಿಸಿ,ಉಳಿಸಬೇಕು. ಸರಕಾರದ ಮೂಲಕ ಕಾವ್ಯಗಳ ಮುದ್ರಣ ನಡೆದು ಒದಗಿಸುವ ಪಯತ್ನವಾಗಬೇಕೆಂದು ನುಡಿದರು. ಜಿಲ್ಲಾ ಗಮಕ ಕಲಾ ಪರಿಷತ್ ಅಧ್ಯಕ್ಷ ಮಧೂರು ಮೋಹನ ಕಲ್ಲೂರಾಯ ಪ್ರಸ್ತಾವಿಸಿದರು. ತುಳು ಶಿವಳ್ಳಿ ಸಭಾ ತಾಲೂಕು ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಮತ್ತು ಉದ್ಯಮಿ ಶ್ರೀಶ ಮುಚ್ಚಿನ್ನಾಯ ಶುಭಾಶಂಸನೆಗೈದರು. ಗಮಕ ಕಲಾ ಪರಿಷತ್ ತಾಲೂಕು ಕಾರ್ಯದರ್ಶಿ ರಾಮಕೃಷ್ಣ ಭಟ್ ಬಳಂಜ ಸ್ವಾಗತಿಸಿ,,ಸುವರ್ಣಕುಮಾರಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ! ಶ್ರೀಧರ ಭಟ್ ವಂದಿಸಿದರು. ಶ್ರೀವಿದ್ಯಾ ಐತಾಳ್ ಕುಮಾರವ್ಯಾಸ ಭಾರತದ ದ್ರುಪದ ಗರ್ವಭಂಗ ಭಾಗದ ಕಾವ್ಯ ವಾಚಿಸಿ,ಮಧೂರು ಮೋಹನ ಕಲ್ಲೂರಾಯರು ವ್ಯಾಖ್ಯಾನಿಸಿ ಇಡೀ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು