News Karnataka Kannada
Saturday, April 20 2024
Cricket
ಮಂಗಳೂರು

ಎ. ಜೆ. ಆಸ್ಪತ್ರೆಯಲ್ಲಿ ಕರಾವಳಿ ಕರ್ನಾಟಕದ ಮೊದಲನೇ ಯಶಸ್ವಿ ರೋಬೋಟಿಕ್ ವಿಪ್ಪಲ್ ಶಸ್ತ್ರಚಿಕಿತ್ಸೆ

Aj
Photo Credit :

ಮಂಗಳೂರು: ಸುಳ್ಯ ತಾಲೂಕಿನ 65 ವರ್ಷದ ಪುರುಷನಿಗೆ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅವರಿಗೆ ವಿಪ್ಪಲ್ ಪಿಡಿ (WHIPPLEPD) ಎಂಬ ಸಂಕಿರ್ಣ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು, ಇದು ಬಹು ಅಂಗಗಳನ್ನು ತೆಗೆಯುವ ಮತ್ತು ಪುನರ್ ನಿರ್ಮಾಣದ ಪ್ರಕ್ರಿಯೆಯನ್ನು
ಒಳಗೊಂಡಿರುತ್ತದೆ.

ಅತ್ಯಾಧುನಿಕ ರೋಬೋಟ್ ನೊಂದಿಗೆ ಎ.ಜೆ. ಆಸ್ಪತ್ರೆಯ ಗ್ಯಾಸ್ಟ್ರೋ ಅಂಕೊ ಸರ್ಜನ್ ಗಳಾದ ಡಾ. ರೋಹನ್ ಶೆಟ್ಟಿ
ಮತ್ತು ಡಾ. ಅಶ್ವಿನ್ ಆಳ್ವ ಈ ಶಸ್ತ್ರಕ್ರಿಯೆಯನ್ನು ಯಶಸ್ವಿಯಾಗಿ ಮಾಡಿದರು ಹಾಗೂ ಅರಿವಳಿಕೆ ತಜ್ಞ ಡಾ. ಹರೀಶ್ ಕಾರಂತ್ ಮತ್ತು ವೈದ್ಯಕೀಯ
ಗ್ಯಾಸ್ಟ್ರೋಎಂಟರಾಜಿಸ್ಟ್ ಡಾ. ರಾಘವೇಂದ್ರ ಪ್ರಸಾದ್ ಸಹಕರಿಸಿದರು. ರೋಗಿಯು ಯಾವುದೇ ತೊಂದರೆಗಳಿಲ್ಲದೆ ಶಸ್ತ್ರಚಿಕಿತ್ಸೆಯ ನಂತರ
ಕೇವಲ 7 ದಿನಗಳೊಳಗೆ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಇದು ಕರಾವಳಿ ಕರ್ನಾಟಕದ ಮೊತ್ತಮೊದಲ ರೋಬೋಟಿಕ್ ವಿಪ್ಪಲ್ ಶಸ್ತ್ರಚಿಕಿತ್ಸೆಯಾಗಿದ್ದು, ಇದುವರೆಗೆ ಭಾರತದಲ್ಲಿ ಕೆಲವೇ ಕೇಂದ್ರಗಳು ಈ
ಮೈಲಿಗಲ್ಲನ್ನು ಸಾಧಿಸಿವೆ. ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಕರಾವಳಿ ಕರ್ನಾಟಕದ ಜನರ ಪ್ರಯೋಜನಕ್ಕಾಗಿ ಭವಿಷ್ಯದಲ್ಲಿ
ಇನ್ನೂ ಅನೇಕ ಸುಧಾರಿತ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಬಯಸುತ್ತದೆ.

ರೊಬೊಟಿಕ್ ಶಸ್ತ್ರಚಿಕಿತ್ಸೆಗಳು ವೈದ್ಯಕೀಯ ವಿಜ್ಞಾನದ ಇತ್ತೀಚಿನ ಆವಿಷ್ಕಾರವಾಗಿದ್ದು, ಬೇಗನೆ ಗುಣವಾಗುವ, ಕಡಿಮೆ ಅಸ್ವಸ್ಥತೆಗಳ, ಅತ್ಯಂತ
ನಿಖರವಾದ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಸಹಾಯಕವಾಗಿದೆ.ಎ.ಜೆ. ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳು ಹಾಗೂ ಪರಿಣತಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ತಮ್ಮ ಗೌರವಾನ್ವಿತ
ಮಾಧ್ಯಮದಲ್ಲಿ ಪ್ರಟಿಸಬೇಕಾಗಿ ವಿನಂತಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು