ಬೆಳ್ತಂಗಡಿ : ಮುಂಡೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಇಲ್ಲಿ ಜನವರಿ 12ರಿಂದ 17ರ ತನಕ ನಡೆಯುವ ಅಷ್ಟಬಂಧ ಬ್ರಹ್ಮ ಕಲಶೋತ್ಸವ ದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಮುಂಡೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ರಾಗಿರುವ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರು ಇಂದು ಬಿಡುಗಡೆ ಗೊಳಿಸಿ ಬ್ರಹ್ಮ ಕಲಶೋತ್ಸವ ವು ಯಶಸ್ವಿಯಾಗಿ ನಡೆಯಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ದಯಾಕರ್ ಕಾರ್ಯಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ, ಪ್ರಧಾನ ಕಾರ್ಯದರ್ಶಿ ರಾಜೀವ್ ಸಾಲಿಯಾನ್,ಕೋಶಾಧಿಕಾರಿ ಕಿಶೋರ್ ಹೆಗ್ಡೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಕಿನಿಂಜ, ಹಾಗೂ ಇತರ ಸಮಿತಿ ಸಂಚಾಲಕರು, ಉಪ ಸಂಚಾಲಕರು ಗಳಾದ ಚಾಮರಾಜ ಸೆಮಿತ, ಭಾರತಿ ಆಚಾರ್ಯ, ಯಾದವ ಕುಲಾಲ್, ಜಯಾನಂದ ಪರನೀರು, ಅಶೋಕ್ ಕೊಡಕ್ಕಲು, ಜಯರಾಜ್ ಬಂಗೇರ, ವಿಶ್ವನಾಥ ಶೆಟ್ಟಿ, ಜಿನ್ನಪ್ಪ ಮೂಲ್ಯ, ಸುರೇಶ ನಾಯ್ಕ್, ರಮೇಶ್ ಕುಲಾಲ್, ಶ್ರೀಧರ್ ಅಂಚನ್, ಹೇಮರಾಜ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.