ಗ್ರಾಮವಿದ್ಯಾ ಮಂಗಳೂರು ಕೇಂದ್ರವು 2021 ರ ಡಿ.10 ಮತ್ತು 11 ರಂದು ಪರ್ಯಾಯ ಮತ್ತು ಇಂಧನ ದಕ್ಷ ಕಟ್ಟಡ ತಂತ್ರಜ್ಞಾನಗಳ ಕುರಿತು ಎರಡು ದಿನಗಳ ಪರಿಚಯಾತ್ಮಕ ಕಾರ್ಯಾಗಾರವನ್ನು ಆಯೋಜಿಸಿತು. ಮಂಗಳೂರು ಬಲ್ಲಾಲ್ ಬಾಗ್ ಕೊಡಿಯಲ್ಗುತ್ತಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮವಿದ್ಯಾ ಮಂಗಳೂರು ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಿತು. ಉಪನ್ಯಾಸ, ಆಡಿಯೋ-ವಿಶುಯಲ್ ಪ್ರಸ್ತುತಿ, ಹ್ಯಾಂಡ್ಸ್-ಆನ್ ತರಬೇತಿ ಮತ್ತು ಸಂವಾದಾತ್ಮಕ ಚರ್ಚೆಗಳು ಸೇರಿದಂತೆ ವಿವಿಧ ತರಬೇತಿ ವಿಧಾನಗನ್ನೊಳಗೊಂಡ ಕಾರ್ಯಾಗಾರವು ಪರ್ಯಾಯ ಮತ್ತು ಶಕ್ತಿ ದಕ್ಷ ಕಟ್ಟಡ ತಂತ್ರಜ್ಞಾನಗಳ ವಿವಿಧ ಅಂಶಗಳನ್ನು ಶಿಬಿರಾರ್ಥಿಗಳಿಗೆ ಪರಿಚಯಿಸಿತು.
ಮಣ್ಣಿನ ವಾಸ್ತುಶಿಲ್ಪದ ಜಾಗತಿಕ ಪರಂಪರೆ, ಮಣ್ಣಿನ ನಿರ್ಮಾಣ ಸ್ಥಿರಗೊಳಿಸುವ ತಂತ್ರಗಳ, ಸೌಮ್ಯ ಸೌರ ವಾಸ್ತುಶಿಲ್ಪ, ಅಡಿಪಾಯ ಮತ್ತು ರೂಫಿಂಗ್ ವ್ಯವಸ್ಥೆಗಳಲ್ಲಿ ಪರ್ಯಾಯಗಳು, ಫಿಲ್ಲರ್ ಸ್ಲ್ಯಾಬ್ಗಳು, ಸಂಯೋಜಿತ ಟಿ-ಬೀಮ್ ಛಾವಣಿಗಳು, ಕಲ್ಲಿನ ಕಮಾನುಗಳು ಮತ್ತು ಗುಮ್ಮಟಗಳು, ಭೂಕಂಪ ನಿರೋಧಕ ಮೇಸ್ತ್ರಿ ಕೆಲಸ ಮತ್ತು ಸಾಂಸ್ಕೃತಿಕ ವಿನ್ಯಾಸ ವಿಧಾನಗಳಂತಹ ವಿಷಯಗಳನ್ನು ಕೋರ್ಸ್ ಒಳಗೊಂಡಿತ್ತು. ಯುವ ಇಂಜಿನಿಯರ್ಗಳು ಮತ್ತು ವಾಸ್ತುಶಿಲ್ಪಿಗಳು, ಮೇಸ್ತ್ರಿ, ವೈದ್ಯ, ವ್ಯಾಪಾರಿ, ರೈತ ಮತ್ತು ಸಾಫ್ಟ್ವೇರ್ ಎಂಜಿನಿಯರ್ ಸೇರಿದಂತೆ ಹನ್ನೆರಡು ಆಕಾಂಕ್ಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಐಐಎಸ್ಸಿಯ ಸಿವಿಲ್ ಎಂಜಿನಿಯರಿಂಗ್ ಮಾಜಿ ಪ್ರಾಧ್ಯಾಪಕರು, ಆಸ್ಟ್ರಾ ಸಂಸ್ಥೆಯ ಮಾಜಿ ಅಧ್ಯಕ್ಷರು ಮತ್ತು ಗ್ರಾಮವಿದ್ಯಾದ ಅಧ್ಯಕ್ಷರಾದ ಪ್ರೊ.ಕೆ.ಎಸ್.ಜಗದೀಶ್ ದಿಕ್ಸೂಚಿ ಉಪನ್ಯಾಸ ನೀಡಿದರು. “ಸುಸ್ಥಿರ ಭವಿಷ್ಯ ಮತ್ತು ಆರೋಗ್ಯಕರ ಜೀವನೋಪಾಯಕ್ಕಾಗಿ ಪರ್ಯಾಯ ತಂತ್ರಜ್ಞಾನ ಆಂದೋಲನವನ್ನು ಮುನ್ನಡೆಸಲು ಈ ಕ್ಷೇತ್ರದ ಯುವ ವೃತ್ತಿಪರರು ಮುಂದೆ ಬರಬೇಕು,” ಎಂದು ಅವರು ಹೇಳಿದರು. ಗ್ರಾಮವಿದ್ಯಾ ಮಂಗಳೂರು ಕೇಂದ್ರದ ಸಂಯೋಜಕ ಸುಭಾಸ್ ಚಂದ್ರ ಬಸು ಕಾರ್ಯಕ್ರಮ ಪರಿಚಯಿಸಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾತ್ಯಕ್ಷಿಕೆ ಮತ್ತು ತರಬೇತಿಯ ನೇತೃತ್ವವನ್ನು ಗ್ರಾಮವಿದ್ಯಾ ಬೆಂಗಳೂರು ಕೇಂದ್ರದ ಇಂಜಿನಿಯರ್ ಹರೀಶ್ ಪ್ರಸಾದ್ ಮತ್ತು ಇಂಜಿನಿಯರ್ ಪ್ರಮೋದ್ ವಹಿಸಿದರು.
ಗ್ರಾಮವಿದ್ಯಾ ಒಂದು ಪರ್ಯಾಯ ತಂತ್ರಜ್ಞಾನಗಳ ಸಂಶೋಧನೆ ಮತ್ತು ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ಸ್ವಯಂಸೇವಕ ಸಂಸ್ಥೆಯಾಗಿದೆ. ವೃತ್ತಿಪರರು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ತಂತ್ರಜ್ಞರು ಮತ್ತು ಸಮಾಜಶಾಸ್ತ್ರಜ್ಞರನ್ನು ಒಳಗೊಂಡಿರುವ ಈ ಸಂಸ್ಥೆ ಸೂಕ್ತ ಪರ್ಯಾಯ ಪರಿಸರ ಸ್ನೇಹಿ ತಂತ್ರಜ್ಞಾನಗಳ ಮೂಲಕ ಸ್ವಾವಲಂಬಿ ಮತ್ತು ಸುಸ್ಥಿರ ಜೀವನೋಪಾಯವನ್ನು ರಚಿಸುವ ಕನಸನ್ನು ಹೊಂದಿದೆ. ಸಂಸ್ಥೆಯ ಪ್ರವರ್ತಕರು ದೇಶದಲ್ಲಿ ಪರ್ಯಾಯ ಮತ್ತು ಇಂಧನ ದಕ್ಷತೆಯ ನಿರ್ಮಾಣ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಂಚೂಣಿಯಲ್ಲಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಅವರು ಈ ತಂತ್ರಜ್ಞಾನಗಳನ್ನು ದೇಶದಾದ್ಯಂತ ಜನಪ್ರಿಯಗೊಳಿಸಿದ್ದಾರೆ.