ಬೆಳ್ತಂಗಡಿ: ಪೆರಿಂಜೆ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ಫೆ. ೧೦ರಿಂದ ಫೆ. ೧೪ರವರೆಗೆ ನಡೆಯಲಿರುವ ಸಹಸ್ರ ಕಲಶ ಸಹಿತ ಬ್ರಹ್ಮ ಕುಂಭಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶ್ರೀ ಪಡ್ಡ್ಯಾರಬೆಟ್ಟ ಕ್ಷೇತ್ರದಲ್ಲಿ ಜರಗಿತು.
ಕ್ಷೇತ್ರದ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ ಕುಮಾರ್, ಕ್ಷೇತ್ರದ ಪ್ರಧಾನ ಅರ್ಚಕರಾದ ಮಾರೂರು ಖಂಡಿಗದ ವೇ|ಮೂ| ರಾಮದಾಸ ಅಸ್ರಣ್ಣರು, ವಿಕಾಸ್ ಜೈನ್ ಬಾಲ್ನಗುತ್ತು, ವಿಶ್ವಾಸ್ ಜೈನ್ ಬಾಲ್ನಗುತ್ತು, ಪೆರಿಂಜೆ ರಾಜ್ಯಗುತ್ತುವಿನ ಡಾ| ಜಯರಾಜ ಕಂಬಳಿ, ಗೋಪಾಲಕೃಷ್ಣ ಉಪಾಧ್ಯಾಯ ಸಂಪಿಗೆದಡಿ, ಪ್ರಸನ್ನ ಭಟ್ ಮಾರೂರು ಖಂಡಿಗ, ಪದ್ಮರಾಜ ಪೇರಿ, ರಮೇಶ್ ಹೆಗ್ಡೆ ಕೊಡಮಣಿ, ಆನಂದ ಕೋಟ್ಯಾನ್ ಕೈದೊಟ್ಟು, ವಿಜಯ ಉಜಿರಾದೆ ಉಪಸ್ಥಿತರಿದ್ದರು.