News Karnataka Kannada
Friday, April 26 2024
ಮಂಗಳೂರು

ಪ್ರಧಾನಿ ಆರೋಗ್ಯ ವೃದ್ದಿಗಾಗಿ ತಾಲೂಕಿನ ಶಿವ ದೇವಾಲಯದಲ್ಲಿ ಮೃತ್ಯುಂಜಯ ಹೋಮ‌

Temple
Photo Credit : News Kannada

ಬೆಳ್ತಂಗಡಿ : ಪ್ರಧಾನಿ ನರೇಂದ್ರ ಮೋದಿಯವರ ಆರೋಗ್ಯ ವೃದ್ಧಿ ಮತ್ತು ದೀರ್ಘಾಯುಷ್ಯ ಪ್ರಾಪ್ತಿಗಾಗಿ ತಾಲೂಕಿನ‌ ಜನತೆಯ ಪರವಾಗಿ ಶಾಸಕ ಹರೀಶ್ ಪೂಂಜಾ ರವರ ನೇತ್ರತ್ವದಲ್ಲಿ ತಾಲೂಕಿನ ಸುಮಾರು 25 ಶಿವ ದೇವಾಲಯದಲ್ಲಿ ಮೃತ್ಯುಂಜಯ ಹೋಮ ನಡೆಯಿತು.

ಪ್ರಧಾನಿ‌ ನರೇಂದ್ರ ಮೋದಿಯವರ ಆರೋಗ್ಯ ವೃದ್ದಿ‌ ಹಾಗೂ ದೀರ್ಘಾಯುಷ್ಯಕ್ಕಾಗಿ ಮೃತ್ಯುಂಜಯ ಹೋಮದ ಜತೆಗೆ ಪ್ರಾರ್ಥನೆ ಸಲ್ಲಿಸಲಾಯಿತು.‌
ತಾಲೂಕಿನ ಪ್ರಮುಖ ಶಿವ ದೇವಾಲಯಗಳಾದ ವೇಣೂರು ಮಹಾಲಗೇಶ್ವರ, ಕುತ್ಯಾರು ಸೋಮನಾಥೇಶ್ವರ, ಮರೋಡಿ ಉಮಾಮಹೇಶ್ವರ, ಕಾಶಿಪಟ್ಣ ಪಂಚಲಿಂಗೇಶ್ವರ, ಗರ್ಡಾಡಿ ನಂದಿಕೇಶ್ವರ, ಶಿರ್ಲಾಲು ಮಹಾಲಿಂಗೇಶ್ವರ, ಮಲ್ಲಿಪ್ಪಾಡಿ ಸದಾಶಿವೇಶ್ವರ, ಓಡಿಲು ಮಹಾಲಿಂಗೇಶ್ವರ, ಅಳದಂಗಡಿ ಸೋಮನಾಥೇಶ್ವರಿ, ನಾವರ ಮಹಾಲಿಂಗೇಶ್ವರ, ಕೇಳ್ಕರ ಮಹಾಲಿಂಗೇಶ್ವರ, ಸುರ್ಯ ಸದಾಶಿವೇಶ್ವರ, ನಿಡಿಗಲ್ ಲೋಕನಾಥೇಶ್ವರ, ಇಂದಬೆಟ್ಟು ಅರ್ಧನಾರೀಶ್ವರ, ಕೂಡಬೆಟ್ಟು ಸದಾಶಿವೇಶ್ವರ, ಕಳೆಂಜ ಸದಾಶಿವೇಶ್ವರ, ರುದ್ರಗಿರಿ ಮೃತ್ಯುಂಜಯ, ಕೋರಿಂಜ ಪಂಚಲಿಂಗೇಶ್ವರ, ಕರಾಯ ಮಹಾಲಿಂಗೇಶ್ವರ, ಕುರಾಯ ಸದಾಶಿವೇಶ್ವರ, ಮಲೆಂಗಲ್ಲು ಉಮಾ ಮಹೇಶ್ವರ, ಪಜಿರಡ್ಕ ಸದಾಶಿವೇಶ್ವರ, ಬಯಲು, ಅಪ್ಪಿಲ ಉಮಾಮಹೇಶ್ವರ, ಚಾರ್ಮಾಡಿ ಪಂಚಲಿಂಗೇಶ್ವರ ಮೊದಲಾದ ಶಿವ ದೇವಾಲಯದಲ್ಲಿ ಆಯಾಯ ದೇವಾಲಯಗಳ ಆಡಳಿತ ಮಂಡಳಿ, ಊರಿನ ಗಣ್ಯರ, ಪ್ರಮುಖರ ಹಾಗೂ ದೇವಾಲಯಗಳ ಅರ್ಚಕರ ನೇತೃತ್ವದಲ್ಲಿ ಮೃತ್ಯುಂಜಯ ಹೋಮ ನಡೆಯಿತು.‌

ಮೃತ್ಯುಂಜಯ ಹೋಮ ನಡೆದ ದೇವಾಲಯಗಳಲ್ಲಿ ಆಯಾಯ ದೇವಾಲಯಗಳ ಆಡಳಿತ ಮೊಕ್ತೇಸರರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರುಗಳು, ಪ್ರಮುಖರು, ಗ್ರಾ.ಪಂ. ಸದಸ್ಯರುಗಳು, ಪ್ರಧಾನಿಯವರ ಅಭಿಮಾನಿಗಳು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು