ಮಂಗಳೂರು : ಬಾಲಕಿಯ ಅತ್ಯಾಚಾರ ವೆಸಗಿ ಕೊಂದವರಿಗೆ ಕಠಿನ ಶಿಕ್ಷೆ ನೀಡಿ ಪೋಲಿಸ್ ಆಯುಕ್ತರಿಗೆ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಒತ್ತಾಯ
ಉಳಾಯಿಬೆಟ್ಟು ಸಮೀಪದ ಪರಾರಿಯಾ ಹಂಚಿನ ಕಾರ್ಖಾನೆಯಲ್ಲಿ 8ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಂದವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ನಾಲ್ಕನೇ ತರಗತಿ ವಿದ್ಯಾರ್ಥಿನಿ ಪೊಲೀಸ್ ಆಯುಕ್ತರಿಗೆ ಮನವಿ ಪತ್ರವೊಂದನ್ನು ಖುದ್ದು ನೀಡಿ ಒತ್ತಾಯಿಸಿದ್ದಾಳೆ.
ಕುಳಾಯಿಯ ನಿರಂಜನ್ ಹಾಗೂ ಪವಿತ್ರ ದಂಪತಿಯ ಪುತ್ರಿ ಚಾರ್ವಿ ನಿರಂಜನ್ ತನ್ನ ಪೋಷಕರೊಂದಿಗೆ ಇಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬಾಲಕಿಗೆ ನ್ಯಾಯ ಸಿಗಬೇಕು ಹಾಗೂ ನನ್ನಂಥ ಮಕ್ಕಳಿಗೆ ರಕ್ಷಣೆ ಸಿಗಬೇಕು ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರನ್ನು ಒತ್ತಾಯಿಸಿದರು.