ಮಂಗಳೂರು : ವಾರ್ಡ್ ಸಮಿತಿ ರಚನೆಯಾದರೆ ಬಿಜೆಪಿ ಜನರಿಗೆ ಉತ್ತಮ ಆಡಳಿತ ನೀಡುತ್ತದೆ. ಬಿಜೆಪಿ ಬೆಳೆಯುತ್ತದೆ ಎನ್ನುವ ಕಾರಣಕ್ಕೆ ಅಭಿವೃದ್ಧಿ ಕೆಲಸಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಹಳದಿ ರೋಗ ಇದ್ದವರಿಗೆ ಊರೆಲ್ಲಾ ಹಳದಿ ಕಾಣುತ್ತದೆ ಇದೇ ಪರಿಸ್ಥಿತಿ ಜೆ.ಆರ್.ಲೊಬೋರದ್ದು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.
ಅವರು ಮಂಗಳೂರಿನ ಅಟಲ್ ಸೇವಾ ಕೇಂದ್ರದಲ್ಲಿ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿ ಪಾಲಿಕೆ ವಾರ್ಡ್ ಸಮಿತಿ ಪಟ್ಟಿಯಲ್ಲಿ ಬಿಜಪಿಯವರು ಮಾತ್ರ ಇದ್ದರೆ ಎನ್ನುವ ಮಾಜಿ ಶಾಸಕ ಜೆ.ಆರ್.ಲೊಬೋರವರ ಹೇಳಿಕೆ ಅವರಿಗೆ ಶೋಭೆ ತರುವಂತಹದಲ್ಲ, ನಾವು ಬಹಿರಂಗ ಚರ್ಚೆಗೆ ಸಿದ್ಧವಿದ್ದೇವೆ. ಮಂಗಳೂರು ನಗರ ಅಭಿವೃದ್ಧಿಯಾಗುತ್ತಿದೆ. ಬಿಜೆಪಿ ಜನರಿಗೆ ಉತ್ತಮ ಆಡಳಿತ ನೀಡುತ್ತಿದೆ. ಎನ್ನುವ ಕಾರಣಕ್ಕೆ ಅಭಿವೃದ್ಧಿ ಕೆಲಸಗಳಿಗೆ ಕಾಂಗ್ರೆಸ್ ನಾಯಕರು ಅಡ್ಡಗಾಲು ಹಾಕುತ್ತಿದ್ದಾರೆ. ಎಂದು ಹೇಳಿದರು.
ಈ ಸಂದರ್ಭ ಮಂಗಳೂರು ಉತ್ತರ ಮಂಡಲದ ಅಧ್ಯಕ್ಷರಾದ ತಿಲಕ್ರಾಜ್ ಮಂಗಳೂರು ದಕ್ಷಿಣ ಮಂಡಲದ ವಿಜಯ್ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ವಕ್ತಾರರಾದ ರಾಧಾಕೃಷ್ಣರವರು ಉಪಸ್ಥಿತರಿದ್ದರು.