ಬೆಳ್ತಂಗಡಿ: ಮುಂಡಾಜೆಯ ಧುಂಬೆಟ್ಟು ಎಂಬಲ್ಲಿರುವ ಕಾರ್ಗಿಲ್ ವನದಲ್ಲಿ ಕಾರ್ಗಿಲ್ ವಿಜಯ ದಿನದ ಮುನ್ನಾ ದಿನವಾದ ಜು.25ರಂದು ಬೆಳ್ತಂಗಡಿಯ ಮಾಜಿ ಸೈನಿಕರ ಸಂಘದ ವತಿಯಿಂದ ಶ್ರಮದಾನ ಕಾರ್ಯಕ್ರಮ ಜರಗಿತು.
ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರ ನೆನಪಿಗಾಗಿ ಇಲ್ಲಿ 2 ವರ್ಷಗಳ ಹಿಂದೆ ಸಚಿನ್ ಭಿಡೆಯವರು,ತಮ್ಮ ಸ್ವಂತ 5 ಎಕರೆ ಜಾಗದಲ್ಲಿ ಸುಮಾರು 800 ವಿವಿಧ ಜಾತಿಯ ಬೆಲೆಬಾಳುವ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.
ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಎಂ. ವಿ.ಭಟ್ ಹಾಗೂ ಅಧ್ಯಕ್ಷ ಕೃಷ್ಣ ಭಟ್ ಅಶ್ವತ್ಥ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಗಿಡಗಳ ಸುತ್ತ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಸಾವಯವ ಗೊಬ್ಬರವನ್ನು ನೀಡಿ, ಖಾಲಿ ಇದ್ದ ಜಾಗದಲ್ಲಿ ಗಿಡಗಳನ್ನು ನಾಟಿ ಮಾಡಲಾಯಿತು.
ಸಂಘದ ಸದಸ್ಯರಾದ ಸುನಿಲ್ ಶೆಣೈ, ಕಾಂಚೋಡು ಗೋಪಾಲಕೃಷ್ಣ ಭಟ್, ಮೋಹನ ಶೆಟ್ಟಿ, ಉಮೇಶ್ ಬಂಗೇರ, ಶ್ರೀಕಾಂತ ಗೋರೆ, ಉದನೇಶ್ವರ ಭಟ್ ತಂಗಚ್ಚನ್, ಸ್ಥಳೀಯರಾದ ಸುನಿಲ್ ಭಿಡೆ, ಅಶೋಕ ಮೆಹೆಂದಳೆ, ಬಾಲಚಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಶಶಿಧರ್ ಖಾಡಿಲ್ಕರ್ ಸ್ವಾಗತಿಸಿ ಲತಾ ಜಿ.ಭಿಡೆ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಯಿತು.