News Karnataka Kannada
Thursday, April 18 2024
Cricket
ಮಂಗಳೂರು

ಬೆಳ್ತಂಗಡಿ: ಕಾರ್ಗಿಲ್ ವನದಲ್ಲಿ ವಿಜಯ ದಿವಸ್ ಆಚರಣೆ

Kargildivas Blt 26072021
Photo Credit :

ಬೆಳ್ತಂಗಡಿ: ಮುಂಡಾಜೆಯ ಧುಂಬೆಟ್ಟು ಎಂಬಲ್ಲಿರುವ ಕಾರ್ಗಿಲ್ ವನದಲ್ಲಿ ಕಾರ್ಗಿಲ್ ವಿಜಯ ದಿನದ ಮುನ್ನಾ ದಿನವಾದ ಜು.25ರಂದು ಬೆಳ್ತಂಗಡಿಯ ಮಾಜಿ ಸೈನಿಕರ ಸಂಘದ ವತಿಯಿಂದ ಶ್ರಮದಾನ ಕಾರ್ಯಕ್ರಮ ಜರಗಿತು.

ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರ ನೆನಪಿಗಾಗಿ ಇಲ್ಲಿ 2 ವರ್ಷಗಳ ಹಿಂದೆ ಸಚಿನ್ ಭಿಡೆಯವರು,ತಮ್ಮ ಸ್ವಂತ 5 ಎಕರೆ ಜಾಗದಲ್ಲಿ ಸುಮಾರು 800 ವಿವಿಧ ಜಾತಿಯ ಬೆಲೆಬಾಳುವ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಎಂ. ವಿ.ಭಟ್ ಹಾಗೂ ಅಧ್ಯಕ್ಷ ಕೃಷ್ಣ ಭಟ್ ಅಶ್ವತ್ಥ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಗಿಡಗಳ ಸುತ್ತ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಸಾವಯವ ಗೊಬ್ಬರವನ್ನು ನೀಡಿ, ಖಾಲಿ ಇದ್ದ ಜಾಗದಲ್ಲಿ ಗಿಡಗಳನ್ನು ನಾಟಿ ಮಾಡಲಾಯಿತು.

ಸಂಘದ ಸದಸ್ಯರಾದ ಸುನಿಲ್ ಶೆಣೈ, ಕಾಂಚೋಡು ಗೋಪಾಲಕೃಷ್ಣ ಭಟ್, ಮೋಹನ ಶೆಟ್ಟಿ, ಉಮೇಶ್ ಬಂಗೇರ, ಶ್ರೀಕಾಂತ ಗೋರೆ, ಉದನೇಶ್ವರ ಭಟ್ ತಂಗಚ್ಚನ್, ಸ್ಥಳೀಯರಾದ ಸುನಿಲ್ ಭಿಡೆ, ಅಶೋಕ ಮೆಹೆಂದಳೆ, ಬಾಲಚಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಶಶಿಧರ್ ಖಾಡಿಲ್ಕರ್ ಸ್ವಾಗತಿಸಿ ಲತಾ ಜಿ.ಭಿಡೆ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು