ಬೆಳ್ತಂಗಡಿ: ತಾಲೂಕಿನ ಚಾರ್ಮಾಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಮದ್ರೊಟ್ಟು ಪರಿಸರದಲ್ಲಿ ಬುಧವಾರ ರಾತ್ರಿ ಒಂಟಿ ಸಲಗ ಕಾಣಿಸಿಕೊಂಡಿದೆ.
ರಾತ್ರಿ 9ರ ಸುಮಾರಿಗೆ ಇಲ್ಲಿನ ಕೃಷಿ ತೋಟದಲ್ಲಿ ಸಲಗ ಕಂಡುಬಂದಿತ್ತು. ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ತಕ್ಷಣ ಉಪವಲಯ ಅರಣ್ಯಾಧಿಕಾರಿ ಭವಾನಿಶಂಕರ ಹಾಗೂ ಸ್ಥಳೀಯರು ಸೇರಿ ಪಟಾಕಿ ಸಿಡಿಸಿ, ದೊಂದಿಗಳನ್ನು ಬೆಳಗಿ ಸಲಗವನ್ನು ಓಡಿಸಿದರು.
ಬಳಿಕ ತಡರಾತ್ರಿ ಮತ್ತೆ ಆಗಮಿಸಿದ ಸಲಗ ಇಲ್ಲಿನ ಕೃಷಿಕರ ಅಡಕೆ, ಬಾಳೆ ಗಿಡಗಳಿಗೆ ಹಾನಿ ಮಾಡಿದ್ದು ತೋಟಗಳ ನೀರಾವರಿಯ ಪೈಪ್ ಲೈನ್ ಒಡೆದು ಹಾಕಿದೆ. ಸಲಗ ಸಮೀಪದ ನಳೀಲು,ಉರ್ಪೆಲ್ ಗುಡ್ಡೆ ಪರಿಸರದಲ್ಲಿ ಬೀಡುಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.