ಬೆಳ್ತಂಗಡಿ : ಶಿವಮೊಗ್ಗ ಬಜರಂಗದಳದ ಕಾರ್ಯಕರ್ತ ಹರ್ಷರವರು ಹಿಂದೂ ಸಮಾಜಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದು ಇವರನ್ನು ಎಸ್ಡಿಪಿಐ, ಪಿ.ಎಫ್.ಐ. ದೇಶದ್ರೋಹಿ ಸಂಘಟನೆ ಕಾರ್ಯಕರ್ತರು ಹತ್ಯೆ ಮಾಡಿದ್ದು ಇವರನ್ನು ಕೂಡಲೇ ಬಂಧಿಸಬೇಕು ಮತ್ತು ಎಸ್ಡಿಪಿಐ, ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ವಿಶ್ವ ಹಿಂದೂ ಪರಿಷತ್ ಭಜರಂಗದಳದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವಿಶ್ವ ಹಿಂದೂಪರಿಷತ್ನ ಪುತ್ತೂರು ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ ಎಚ್ಚರಿಸಿದ್ದಾರೆ.
ಅವರು ಬೆಳ್ತಂಗಡಿಯಲ್ಲಿ ಸೋಮವಾರ ಶಿವಮೊಗ್ಗ ಹಿಂದೂ ಕಾರ್ಯಕರ್ತ ಹರ್ಷ ಕೊಲೆಯನ್ನು ಖಂಡಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ದೇಶಕ್ಕೆ ಅನ್ಯಾಯವಾದಾಗ ಹಿಂದೂಗಳು ಸುಮ್ಮನಿರಲು ಸಾಧ್ಯವಿಲ್ಲ ಅದೇ ಕಾರಣಕ್ಕೆ ರಾಜ್ಯದಲ್ಲಿ ಕೊಲೆಗಡುಕ ಸಿದ್ಧರಾಮಯ್ಯ ಸರಕಾರ ಇದ್ದಾಗ ರಾಜ್ಯಕ್ಕೆ ಅಪಾಯವಿದೆ ಎಂದು ಹಿಂದೂ ಸಮಾಜ ಸಿದ್ಧರಾಮಯ್ಯ ಸರಕಾರವನ್ನು ಕೆಳಗಿಳಿಸಿ ಬಿಜೆಪಿ ಸರಕಾರವನ್ನು ರಚಿಸಲು ಮುಂದಾಯಿತು.
ಇದೀಗ ಬಿಜೆಪಿ ಸರಕಾರ ಕೂಡ ಹಿಂದೂ ಸಮಾಜದ ರಕ್ಷಣೆ ಮಾಡದಿರುವುದು ಅತ್ಯಂತ ನೋವು ತಂದಿದೆ. ಹಿಂದೂ ಸಮಾಜಕ್ಕೆ ರಕ್ಷಣೆಯನ್ನು ಕೊಡಿ ಇಲ್ಲವಾದಲ್ಲಿ ಭಜರಂಗದಳ, ವಿಶ್ವ ಹಿಂದೂ ಪರಿಷತ್ನಂತಹ ಸಂಘಟನೆಗಳಿಗೆ ಹಿಂದೂ ಸಮಾಜವನ್ನು ರಕ್ಷಿಸಲು ಗೊತ್ತಿದೆ ಇನ್ನೆರಡು ದಿನದಲ್ಲಿ ಕೊಲೆಗಡುಕನನ್ನು ಪತ್ತೆಹಚ್ಚದಿದ್ದಲ್ಲಿ ಹಿಂದೂ ಸಮಾಜವೇ ಕಾನೂನಿಗೆ ಇಳಿಯಬೇಕಾದೀತು ಎಂದು ಎಚ್ಚರಿಸಿದರು.
ಮೂರು ಮಾರ್ಗದ ಬಳಿ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪ.ಪಂ ಸದಸ್ಯ ಶರತ್, ವಕೀಲರಾದ ಅನೀಲ್, ಮುಖಂಡರುಗಳಾದ ಈಶ್ವರ ಬೈರ, ಬಾಲಕೃಷ್ಣ ಶೆಟ್ಟಿ, ರಾಘವ್ ಕಲ್ಮಂಜ, ಸೋಮನಾಥ ದೇಸಾಯಿ, ಸಂತೋಷ್ ಕುಮಾರ್, ಸಂತೋಷ್ ಆಚಾರ್ಯ, ದಿನೇಶ್ ಚಾರ್ಮಾಡಿ, ಪ್ರಮೋದ್ ದಿಡುಪೆ ಮೊದಲಾದವರು ಉಪಸ್ಥಿತರಿದ್ದರು.