ಮಂಗಳೂರು : ಮನಪಾ ಮೇಯರ್ ಹುದ್ದೆಗೆ ಮಾರ್ಚ್ 2 ರಂದು ನಿಗದಿಯಾಗಿದ್ದ ಬಹುನಿರೀಕ್ಷಿತ ಚುನಾವಣೆ ದಿಢೀರ್ ಮುಂದೂಡಿಕೆಯಾಗಿದೆ ಪಾಲಿಕೆಯ 23 ನೇಯ ಅವಧಿಯ ಮೇಯರ್ ಹಾಗೂ ಉಪಮೇಯರ್ ಆಯ್ಕೆಗಾಗಿ ಮೇಯರ್ ಸ್ಥಾನವನ್ನು ಸಾಮಾನ್ಯ ಹಾಗೂ ಉಪ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ ಎ ಮಹಿಳೆ ವರ್ಗಕ್ಕೆ ಮೀಸಲಿರಿಸಿದ್ದು ಅದರಂತೆ ಮೇಯರ್ ಹಾಗೂ ಉಪಮೇಯರ್ ಚುನಾವಣೆಯನ್ನು ಮಾರ್ಚ್2 ರಂದು ನಿಗದಿಪಡಿಸಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮಂಗಳೂರು ಪಾಲಿಕೆ ಆಯುಕ್ತರಿಗೆ ತಿಳಿಸಿದರು .ಅದರಂತೆ ಈಗಾಗಲೇ ಪಾಲಿಕೆಯ ಎಲ್ಲ ಸದಸ್ಯರಿಗೆ ತಿಳಿವಳಿಕೆ ಪತ್ರ ಜಾರಿ ಮಾಡಲಾಗಿತ್ತು.
ಮಹಾರಾಷ್ಟ್ರದ ರಾಹುಲ್ ರಮೇಶ್ ಅವರು ಸುಪ್ರೀಂಕೋರ್ಟಿನಲ್ಲಿ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ದೂರು ಸಲ್ಲಿಸಿದ ವೇಳೆ ನ್ಯಾಯಾಲಯವು ಸ್ಥಳೀಯ ಸಂಸ್ಥೆಯ ಮೀಸಲಾತಿ ವಿಚಾರವಾಗಿ ಬೊಟ್ಟು ಮಾಡಿ ಆದೇಶ ನೀಡಿದೆ .ಹೀಗಾಗಿ ನ್ಯಾಯಾಲಯದ ಈ ಆದೇಶದ ಬಗ್ಗೆ ಮಂಗಳೂರು ಪಾಲಿಕೆಯ ಇಪ್ಪತ್ತು ಮೂರನೇ ಅವಧಿಯ ಮೇಯರ್ ಉಪಮೇಯರ್ ಹಾಗೂ 4ಸ್ಥಾಯಿ ಸಮಿತಿ ಚುನಾವಣೆ ಮಾರ್ಚ್ ಎರಡರಂದು ನಿಗದಿಪಡಿಸ ರಿಂದ ಈ ಚುನಾವಣೆ ಅನ್ವಯವಾಗುವುದೇ ಎಂಬ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರು ಫೆಬ್ರವರಿ ಇಪ್ಪತ್ತ ನಾಲ್ಕ ರಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ .ಅಲ್ಲದೆ ಫೆಬ್ರವರಿ ಇಪ್ಪತ್ತು ರಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಿಂದಲೂ ಪತ್ರ ಬರೆಯಲಾಗಿತ್ತು ಆದರೆ ಈವರೆಗೂ ಸರಕಾರದಿಂದ ಯಾವುದೇ ಸ್ಪಷ್ಟೀಕರಣ ಸ್ವೀಕೃತವಾಗಿಲ್ಲ ಹೀಗಾಗಿ ಮಾರ್ಚ್ ಎರಡರಂದು ನಿಗದಿಪಡಿಸಿದ ಮಂಗಳೂರು ಪಾಲಿಕೆಯ ಮೇಯರ್ ಉಪಮೇಯರ್ ಸ್ಥಾಯಿ ಸಮಿತಿ ಚುನಾವಣೆಯನ್ನು ಮುಂದೂಡಲು ನಿರ್ಧರಿಸಲಾಗಿದೆ .
ಸದ್ಯ ಮೇಯರ್ ಪ್ರೇಮಾನಂದ ಶೆಟ್ಟಿ ಅವರ ಅಧಿಕಾರಾವಧಿ ಮಾರ್ಚ್ ಎರಡರಂದು ಕೊನೆಗೊಳ್ಳುತ್ತದೆ ಆದರೆ ಉಪಮೇಯರ್ ಚುನಾವಣೆ ಮುಂದೂಡಿಕೆ ಆದಕಾರಣದಿಂದ ಮುಂದೇನು ಎಂಬ ಬಗ್ಗೆ ಕುತೂಹಲ ಶುರುವಾಗಿದೆ .ಸದ್ಯದ ಮಾಹಿತಿ ಪ್ರಕಾರ ಹಾಲಿ ಮೇಯರ್ ಉಪಮೇಯರ್ ಸ್ಥಾಯಿ ಸಮಿತಿ ಮುಂದಿನ ಚುನಾವಣೆವರೆಗೂ ಮುಂದುವರಿಯುವ ಸಾಧ್ಯತೆಯಿದೆ .ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಮೇಯರ್ ಆಗಿ ಅಶ್ರಫ್ ಇಂಥಹುದೇ ಸಂದಿಗ್ಧ ಕಾರಣದಿಂದ ಸುಮಾರು 2ತಿಂಗಳು ಹೆಚ್ಚುವರಿಯಾಗಿ ಅಧಿಕಾರ ನಡೆಸಿದ್ದರು