News Karnataka Kannada
Wednesday, April 24 2024
Cricket
ಮಂಗಳೂರು

ಮಹಿಳೆಗೆ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದಡಿ ಮೂವರ ಬಂಧನ

Mangalore
Photo Credit :

ಮಂಗಳೂರು : ಮಹಿಳೆಗೆ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದಡಿ ಸಾಮಾಜಿಕಾರ್ಯಕರ್ತ ಆಸೀಫ್ ಸೇರಿ ಮೂವರನ್ನು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ಮೂಲ್ಕಿ ಕಾರ್ನಾಡು ನಿವಾಸಿ ಮಹಮ್ಮದ್ ಆಸಿಫ್ ಮಂಗಳೂರು ಪಂಪ್ ವೆಲ್ ನಿವಾಸಿ ಶಿವಂ ಯಾನೆ ಶಿವಲಿಂಗ ಮತ್ತು ಮಹಮ್ಮದ್ ಅಫ್ತಾಬ್ ಬಂಧಿತ ಆರೋಪಿಗಳು

ಕೋವಿಡ್ 19 ಸಮಯದಲ್ಲಿ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಮೂಲದ ಮಹಿಳೆ ಕೆಲಸ ಕಳೆದುಕೊಂಡು ಮನೆ ಬಾಡಿಗೆ ಕಟ್ಟಲು ತೊಂದರೆಯಾದ ಸಮಯದಲ್ಲಿ ಪಂಪನಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಂ ಯಾನೆ ಶಿವಲಿಂಗ ಎಂಬವರ ಬಳಿ ಸಮಸ್ಯೆಯನ್ನು ಹೇಳಿಕೊಂಡಿದ್ದರೂ, ಈ ವೇಳೆ ಶಿವಲಿಂಗ ಮಹಿಳೆಯನ್ನು ಮುಲ್ಕಿಯ ಕಾರ್ನಾಡ್ ನಲ್ಲಿರುವ ಮೈಮುನಾ ಫೌಂಡೇಶ್ ನ ಮನೆಗೆ ಕರೆದುಕೊಂಡು ಹೋಗಿ ಕೆಲಸಕ್ಕೆ ಸೇರಿಸಿದ್ದರು ಮಹಿಳೆ 1ವರ್ಷದಿಂದ ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.

ಈ ವೇಳೆ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಶಶಿಧರ್ ಎಂಬಾತ ಗೋಲ್ಮಾಲ್ ನಡೆಸಿ ಪರಾರಿಯಾಗಿದ್ದ ಈ ವಂಚನೆಯಲ್ಲಿ ಮಹಿಳೆಯು ಪಾಲುದಾರರಾಗಿದ್ದಾರೆ ಎಂದು ಆರೋಪಿಸಿ ಆಸಿಫ್ ದೈಹಿಕ ಹಿಂಸೆ ನೀಡುತ್ತಿದ್ದ ಮಹಿಳೆಯ ಬಳಿಯಿದ್ದ ಮೊಬೈಲ್ ಮೈಕ್ರೋಮ್ಯಾಕ್ಸ್ಟ್ಯಾಬ್ ಇನ್ನೊಂದು ಸಣ್ಣ ಫೋನ್ ಆಧಾರ್ ಕಾರ್ಡ್ ಮುಂತಾದ ದಾಖಲೆಗಳನ್ನು ಕಸಿದುಕೊಂಡಿದ್ದಾರೆ

ಮಾರ್ಚ್ ಮೂವತ್ತ ರಂದು ಮಹಿಳೆ ಇದ್ದ ಕೋಣೆಗೆ ಬಂದ ಆಸಿಫ್ ಜಗಳವಾಡಿ ನಂತರ ಶಿವಂನನ್ನು ಕರೆಯಿಸಿ ಮಹಿಳೆಗೆ ಒಡೆಯುವಂತೆ ಹೇಳಿದ್ದಾರೆ .

ಮಹಿಳೆಯ ಮುಖಕ್ಕೆ ಕೈಯಿಂದ ಪಾರ್ಟಿ ಕುರ್ಚಿಯಿಂದ ಎಡ ಕೈಗೆ ಹೊಡೆದಿದ್ದಾರೆ ಶಿವಂ ಹೋದ ಬಳಿಕ ಆಸಿಫ್ ಮಹಿಳೆಯ ಬಳಿ ಶಶಿಧರ್ ಮಾಡಿದ ತಪ್ಪನ್ನು ಒಪ್ಪಿ ಬರೆದುಕೊಡುವಂತೆ ಒತ್ತಾಯಮಾಡಿ ಬೆಲ್ಟಿನಿಂದ ದೇಹದ ವಿವಿಧ ಭಾಗಕ್ಕೆ ಹೊಡೆದಿದ್ದಾರೆ.

ಬಳಿಕ ವಿಕೆಟ್ ನಿಂದ ಮಹಿಳೆಯ ತಲೆಗೆ ಹೊಡೆದಿದ್ದಾರೆ ನಂತರ ಆಸಿಫ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಅಲ್ಲಿ ಮೇಲಿಂದ ಕೆಳಗೆ ಬಿದ್ದು ಗಾಯಗೊಂಡಿರುವುದಾಗಿ ಡಾಕ್ಟರಗೆ ಸುಳ್ಳು ಹೇಳಬೇಕೆಂದು ಒತ್ತಾಯಿಸಿದರು ಅಲ್ಲದೆ ಜೀವ ಬೆದರಿಕೆ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ಕೊಡಿಸಿ ನಂತರ ಆಶ್ರಮಕ್ಕೆ ಕರೆದುಕೊಂಡು ಬಂದು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಸಂತ್ರಸ್ತ ಮಹಿಳೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು