ಬೆಳ್ತಂಗಡಿ : ಕನ್ನಾಜೆ ಗ್ರಾಮಸ್ಥರು ಬೆಳ್ತಂಗಡಿ ನಗರಕ್ಕೆ ಬರಬೇಕಾದರೆ ೫.೫ಕೀ.ಮೀ ಸುತ್ತುಬಳಸಿ ಬರಬೇಕಾಗಿದ್ದು ವಾಹನ ಬಾಡಿಗೆ ೧೫೦ರೂ. ನೀಡಿದರೂ ರಿಕ್ಷಾ ಚಾಲಕರು ರಸ್ತೆ ಸರಿಯಿಲ್ಲದೆ ಬರುತ್ತಿರಲಿಲ್ಲ. ಇದರಿಂದ ಕನ್ನಾಜೆ ಗ್ರಾಮಸ್ಥರಿಗೆ ತೊಂದರೆಯಾಗುತ್ತಿತ್ತು.
ಇದೀಗ ಶಾಸಕ ಹರೀಶ್ ಪೂಂಜಾರವರ ಪ್ರಯತ್ನದಿಂದ ಲಾಯಿಲ -ಕನ್ನಾಜೆ ಸಂಪರ್ಕ ರಸ್ತೆ ಅಭಿವೃದ್ಧಿಯಾಗಿದ್ದು ಇದನ್ನು ಸಹಿಸಲಾಗದೇ ಕಳಪೆ ಕಾಮಗಾರಿಯಾಗಿದೆ ಎಂದು ಮಾಜಿ ಶಾಸಕರು ಆರೋಪ ಮಾಡಿದ್ದು ಇದು ರಾಜಕೀಯ ಉದ್ದೇಶವಾಗಿದೆ ಇನ್ನು ಕಾಮಗಾರಿ ಪೂರ್ಣವಾಗಿಲ್ಲ ಕಾಮಗಾರಿ ನಡೆಯುತ್ತಿರುವಾಗ ಕಾಮಗಾರಿ ಕಳಪೆ ಎಂಬುದರಲ್ಲಿ ಹುರುಳಿಲ್ಲ ಎಂದು ಲಾಯಿಲ ಗ್ರಾ.ಪಂ ಮಾಜಿ ಸದಸ್ಯ ಗಿರೀಶ್ ಡೋಂಗ್ರೆ ಆರೋಪಿಸಿದ್ದಾರೆ.
ಅವರು ಗುರುವಾರ ಲಾಯಿಲ- ಕನ್ನಾಜೆ ರಸ್ತೆ ಕಳಪೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿ ಕಾಮಗಾರಿ ಪೂರ್ಣಗೊಂಡ ನಂತರ ಐದು ವರ್ಷ ನಿರ್ವಹಣೆ ಇದೆ, ಇಂಜಿನಿಯರ್ ಹಾಗೂ ಗುತ್ತಿಗೆದಾರರು ಉತ್ತಮ ಕೆಲಸ ಮಾಡುತ್ತಿದ್ದು ಯಾವುದೇ ಕಳಪೆ ಕಾಮಗಾರಿ ನಡೆಯುತ್ತಿಲ್ಲ ಕಳಪೆ ಕಾಮಗಾರಿ ಆರೋಪ ಬಂದ ತಕ್ಷಣ ಶಾಸಕ ಹರೀಶ್ ಪೂಂಜಾ ಸಂಬಂಧಪಟ್ಟ ಇಂಜಿನಿಯರ್ಗಳನ್ನು ಸಂಪರ್ಕಿಸಿ ಕಾಮಗಾರಿ ಪರಿಶೀಲಿಸುವಂತೆ ಸೂಚಿಸಿದ್ದಾರೆ.
ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ. ಅಲ್ಲದೆ ಕನ್ನಾಜೆ ಪ್ರದೇಶಕ್ಕೆ ಸುಮಾರು ೨೦ಕೋಟಿ ರೂ.ಗಳಿಗೂ ಅಧಿಕ ಅನುದಾನವನ್ನು ಶಾಸಕ ಹರೀಶ್ ಪೂಂಜಾ ಮಂಜೂರುಗೊಳಿಸಿದ್ದು ಗ್ರಾಮದ ಅಭಿವೃದ್ಧಿಗೆ ಸಂಪೂರ್ಣ ಸಹಕರಿಸಿದ್ದಾರೆ ಎಂದರು.
ವಿಶಾಲಾಕ್ಷಿ ಕನ್ನಾಜೆ ಮಾತನಾಡಿ ಇಪ್ಪತೈದು ವರ್ಷ ಶಾಸಕರಾಗಿದ್ದವರಿಂದ ನಮ್ಮ ಗ್ರಾಮದ ರಸ್ತೆಯನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ ಕೇವಲ ಮೂರುವರೆ ವರ್ಷದಲ್ಲಿ ಶಾಸಕ ಹರೀಶ್ ಪೂಂಜಾ ರಸ್ತೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ನೀರಾವರಿ ಸೌಲಭ್ಯ ಒದಗಿಸಿದ್ದಾರೆ ನಮ್ಮ ರಸ್ತೆಯ ಗುಣಮಟ್ಟದ ಬಗ್ಗೆ ಮೂರನೇ ವ್ಯಕ್ತಿಗಳು ಬಂದು ಪರಿಶೀಲಿಸುವುದು ಬೇಡ ಗಾಮಸ್ಥರಾದ ನಾವೇ ನೋಡಿಕೊಳ್ಳುತ್ತೇವೆ ಎಂದರು.
ಜಗದೀಶ್ ಕನ್ನಾಜೆ ಮಾತನಾಡಿ ಇಪ್ಪತೈದು ವರ್ಷ ಶಾಸಕರಾದವರಿಗೆ ಈ ರಸ್ತೆ ಮಾಡಲು ಸಾಧ್ಯವಾಗಲಿಲ್ಲ ಇದರಿಂದಾಗಿ ಅವರು ಮಾಜಿ ಶಾಸಕರಾಗಿದ್ದಾರೆ.
ಇದೀಗ ಅಭಿವೃದ್ಧಿಯಾಗುತ್ತಿರುವಾಗ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಹಿಂದೆ ಗ್ರಾಮಸ್ಥರು ಹಲವಾರು ಬಾರಿ ಮನವಿ ನೀಡಿದರೂ ಮನವಿಗೆ ಸ್ಪಂದನೆ ನೀಡದೇ ಗ್ರಾಮಸ್ಥರಿಗೆ ಅನ್ಯಾಯ ಮಾಡಿದ ಮಾಜಿ ಶಾಸಕರು ಇದೀಗ ಅಭಿವೃದ್ಧಿ ಆಗುತ್ತಿರುವಾಗ ರಾಜಕೀಯ ಮಾಡುತ್ತಿದ್ದಾರೆ.
ಸುತ್ತವರಿದು ಬರಬೇಕಾದ ಗ್ರಾಮಸ್ಥರ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ ಇದಕ್ಕಾಗಿ ಶಾಸಕ ಹರೀಶ್ ಪೂಂಜಾರವರನ್ನು ಅಭಿನಂದಿಸುತ್ತೇವೆ. ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆಯ ಗುಣಮಟ್ಟವನ್ನು ನೋಡಬಹುದು ಈ ಬಗ್ಗೆ ಸಂದಪಟ್ಟ ಅಧಿಕಾರಿಗಳನ್ನು ಕೂಡ ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳುವಂತೆ ಶಾಸಕರು ಸೂಚಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಸುಧಾಕರ್ ಎಲ್, ಸುಂದರ ಶೆಟ್ಟಿ, ಆನಂದ, ಮೊದಲಾದವರು ಉಪಸ್ಥಿತರಿದ್ದರು.