ಮಂಗಳೂರು : ವಿಶ್ವ ಕೊಂಕಣಿ ಕೇಂದ್ರದಿಂದ ರಾಷ್ಟ್ರೀಯ ಶಿಕ್ಷಣ ನೀತಿ ೨೦ ಹಾಗೂ ಕೊಂಕಣಿ ಶಿಕ್ಷಣಕ್ಕೆ ಪೂರಕ ಅಂಶಗಳ ಬಗ್ಗೆ ಅಂತರ್ಜಾಲ ಗೋಷ್ಠಿ ಸಂಸ್ಥೆಯ ಅಧ್ಯಕ್ಷ ಬಸ್ತಿ ವಾಮನ ಶೆಣೈಯವರ ಉಪಸ್ಥಿತಿಯಲ್ಲಿ ಅ. ೩೦ ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಯೂಟೂಬ್ ಮುಖಾಂತರ ನೇರ ಪ್ರಸಾರ ಜರಗಿತು.
ಈ ಕಾರ್ಯಕ್ರಮವನ್ನು ಗೋವಾದ ಕೊಂಕಣಿ ಶಿಕ್ಷಣ ತಜ್ಞರಾದ ಡಾ. ಭೂಷಣ ಭಾವ ಯವರು ಉದ್ಘಾಟಿಸಿದರು. ಕರ್ನಾಟಕದಲ್ಲಿ ಶಾಲಾ ಮಟ್ಟ ದಲ್ಲಿ ಕೊಂಕಣಿ ಶಿಕ್ಷಣ ಕಳೆದ ಹತ್ತು ವರ್ಷಗಳ ಪ್ರಗತಿಯ ಬಗ್ಗೆ ಕುಮಟಾದ ಕೊಂಕಣಿ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಮುರಲೀಧರ ಪ್ರಭು ಹಾಗೂ ಕೇರಳ ರಾಜ್ಯದ ಬಗ್ಗೆ ಎರ್ನಾಕುಲಮಿನಿಂದ ಶ್ರೀ ರಾಮಕೃಷ್ಣ ಕಿಣಿಯವರೂ ಮತ್ತು ಮಂಗಳೂರು ವಿ.ವಿ.ಯ ಎಮ್ ಎ ಕೊಂಕಣಿ ವಿಭಾಗದ ಮುಖ್ಯಸ್ಥರಾದ ಡಾ. ದೇವದಾಸ ಪೈಯವರು ಸ್ನಾತಕೋತ್ತರ ಶಿಕ್ಷಣದಲ್ಲಿ ಇಂದಿನ ಪ್ರಗತಿ ಹಾಗೂ ಹೊಸ ನೀತಿಯಿಂದ ಆಗುವ ಪ್ರಯೋಜನಗಳ ಮಾಹಿತಿ ನೀಡಿದರು.
ಸಂಸ್ಥೆಯ ವಿಶ್ವಸ್ಥರಾದ ಪ್ರೋ. ಡಾ. ಕಸ್ತೂರಿ ಮೋಹನ ಪೈಯವರು ಗೋಷ್ಠಿಯ ಪ್ರಮುಖ ಸಂಚಾಲಕರಾಗಿದ್ದು ಹೊಸ ಶಿಕ್ಷಣ ನೀತಿಯಲ್ಲಿ ಕೊಂಕಣಿ ಮಾತೃ ಭಾಷಿಕರು ದೇಶದ ಸಂವಿಧಾನದ ಆಶಯ ಪ್ರಮಾಣ ಪ್ರಾಥಮಿಕದಿಂದ ಸ್ನಾತಕೋತ್ತರದ ವರೆಗೆ ಕೊಂಕಣಿ ಶಿಕ್ಷಣವನ್ನು ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಪಡೆಯಲು ಅರ್ಹರಾಗುವಂತಿದೆ, ಇದರ ಪ್ರಯೋಜನವನ್ನು ದೇಶದಾದ್ಯಂತ ಕೊಂಕಣಿಗರು ಪಡೆದು ಕೊಂಕಣಿಯಲ್ಲಿ ಸಾಕ್ಷರರಾಗಬೇಕು ಎಂದು ಕರೆ ಕೊಟ್ಟರು.