ಬೆಳ್ತಂಗಡಿ: ಜೀರ್ಣೋದ್ಧಾರಗೊಳ್ಳುತ್ತಿರುವ ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನಗರ್ಭಗುಡಿಯ ಮೇಲ್ಛಾವಣಿಯ ತಾಮ್ರದ ಹೊದಿಕೆ ಕಾರ್ಯದ ಮುಹೂರ್ತವು ಶಾಸ್ತ್ರೊಕ್ತವಾಗಿ ಜರಗಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಸುಂದರ ಹೆಗ್ಡೆ ಬಿ.ಇ., ಸೋಮಯ್ಯ ಹನೈನಡೆ, ಎ. ಜಯರಾಮ ಶೆಟ್ಟಿ, ಕಾರ್ಯದರ್ಶಿ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆ, ತಾಂತ್ರಿಕ ಸಮಿತಿ ಸಂಚಾಲಕ ಯಂ. ಯಜ್ಞನಾರಾಯಣ ಭಟ್, ಮಾಜಿ ಆಡಳಿತಾಧಿಕಾರಿ ಉಮೇಶ್, ವ್ಯವಸ್ಥಾಪನ ಮತ್ತು ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗರ್ಭಗುಡಿಯ ಮೇಲ್ಛಾವಣಿ ಹಾಗೂ ಎಡನಾಳಿಯ ತಾಮ್ರ ಹೊದಿಕೆಯ ದಾನಿಗಳು ಉಪಸ್ಥಿತರಿದ್ದರು.