News Karnataka Kannada
Thursday, April 25 2024
ಮಂಗಳೂರು

ಶ್ರೀರಾಮನ ನಡೆ ಜಗತ್ತಿಗೆ ಮಾರ್ಗದರ್ಶಿ : ಎಡನೀರು ಶ್ರ್ರಿಗಳು

Shishila
Photo Credit : News Kannada

ಬೆಳ್ತಂಗಡಿ : ಶ್ರೀರಾಮ ಜಗತ್ತಿಗೆ ಮಾದರಿಯಾದ ಅವತಾರಿ ಪುರುಷ. ಆತನ ನಡೆ ನಮಗೆಲ್ಲಾ ಮಾದರಿ ಹಾಗೂ ಮಾರ್ಗದರ್ಶಿಯಾಗಿದೆ. .ರಾಮ ನಾಮ ಅತ್ಯಂತ ಪವಿತ್ರ ನಾಮ . ರಾಮ ನಾಮದಿಂದ ಹನುಮಂತ ಬಲವಂತನಾದ .ಆದುದರಿಂದ ಹನುಮಂತ ಚಿರಂಜೀವಿ . ಹನುಮ ಜಯಂತಿಯಂದು ಶ್ರೀ ರಾಮ ತಾರಕ ಮಂತ್ರ ಹವನ ಮಾಡಿರುವುದು ಅಭಿನಂದನೀಯ. ಎಲ್ಲರಿಗೂ ಒಳಿತಾಗಲಿ . ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.

ಅವರು ಎ 16 ರಂದು ಶಿಶಿಲ ಗ್ರಾಮದ ಶಿವಕೀರ್ತಿ ನಿಲಯದ ಜಯರಾಮ ನೆಲ್ಲಿತ್ತಾಯರ ಮನೆಯಲ್ಲಿ ನಡೆದ ಹನುಮ ಜಯಂತಿ ಮತ್ತು ಶ್ರೀ ರಾಮ ತಾರಕ ಮಂತ್ರ ಜಪ ಹವನದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಶಿಶಿಲದ ಶಿವಕೀರ್ತಿ ನಿಲಯದಲ್ಲಿ ಹನುಮಜಯಂತಿ ಪ್ರಯುಕ್ತ ,ಶ್ರೀರಾಮ ತಾರಕ ಜಪ ಹೊಮ, ರಾಮಾಯಣ ಗ್ರಂಥ ಪೂಜೆ, ಭಜನೆ ಮುಂತಾದ ಧಾರ್ಮಿಕ ಕಾರ್ಯಕ್ರಮ ಊರ ಪರವೂರ ಭಕ್ತರ ಸಮ್ಮುಖದಲ್ಲಿ ವಿಧ್ಯುಕ್ತವಾಗಿ ವೈಭವದಿಂದ ನಡೆಯಿತು. .

ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅವರಿಂದ” ಶ್ರೀರಾಮ ” ಗೀತ ಗಾಯನ, ಶ್ರೀ ರಾಘವೇಂದ್ರ ಭಟ್ ಕಿಗ್ಗ ಮತ್ತು ಶ್ರೀಮತಿ ಲೀಲಾ ಶ್ರೀಧರ ರಾವ್ ಅವರಿಂದ ಭಕ್ತಿಗಾನ ನಡೆಯಿತು . ಭಕ್ತಾಧಿಗಳು ಸಾಮೂಹಿಕ ರಾಮನಾಮ ಸ್ಮರಣೆ , ಸಾಮೂಹಿಕ ಭಜನೆಯಲ್ಲಿ ಪಾಲ್ಗೊಂಡರು.

ಇದೆ ಸಂದರ್ಭದಲ್ಲಿ ಜಯರಾಮ ನೆಲ್ಲಿತ್ತಾಯ ದಂಪತಿಗಳು ಎಡನೀರು ಶ್ರೀಗಳ ಪಾದಪೂಜಾಕಾರ್ಯಕ್ರಮವನ್ನು ನೆರವೇರಿಸಿದರು. ರಾಮತಾರಕ ಮಂತ್ರ ಜಪ ಹೊಮವನ್ನು ವೈದಿಕರಾದ ಶ್ರೀವತ್ಸ್ಯ ಕೆದಿಲಾಯ ಮತ್ತು ತಂಡದವರು ನೆರೆವೆರಿಸಿದ್ದರು. ಶ್ರೀಮತಿ ಪ್ರೀತಿಕಾ ಯಶಸ್ ಸ್ವಾಗತಿಸಿ, ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು