ಮಂಗಳೂರು: ಕಲ್ಬಾವಿ ಪ್ರತಿಷ್ಠಾನ ಮತ್ತು ರೋಟರಿ ಮಂಗಳೂರು ಸಿಟಿ ಆಶ್ರಯದಲ್ಲಿ ಪ್ರಥಮ ವಾರ್ಷಿಕ ಅನಂತಮಿತ್ರ ಕಲ್ಬಾವಿ ಪ್ರಶಸ್ತಿ 2022ಯನ್ನು ಯುವ ಸಾಧಕಿ ರಂಜಿತ ದೇವಾಡಿಗ ಅವರಿಗೆ ಸ್ಟ್ರಿಂಗ್ ಕಲೆಯಲ್ಲಿ ಸಾಧಿಸಿದ ಸಾಧನೆಯನನ್ನು ಪರಿಗಣಿಸಿ ನಗರ ಹೋಟೆಲ್ ಉತ್ಸವ್ ಸಭಾಂಗಣದಲ್ಲಿ ಶನಿವಾರ ಪ್ರದಾನ ಮಾಡಲಾಯಿತು.
ರೋಟರಿ ಸಂಸ್ಥೆಯ ಸಲಹೆಗಾರ ಹಾಗೂ ಪ್ರಶಸ್ತಿಯ ಮುಖ್ಯ ಪ್ರಾಯೋಜಕ ರಾಜೇಂದ್ರ ಕಲ್ಬಾವಿ ಭಾಗವಹಿಸಿ, ತಮ್ಮ ಪೋಷಕರಾದ ದಿ. ಕಲ್ಬಾವಿ ಅನಂತ ಪದ್ಮನಾಭ ರಾವ್ ಹಾಗೂ ದಿ. ಸುಮಿತ್ರ ರಾವ್ ಸ್ಮರಣಾರ್ಥ ಪ್ರಾಯೋಜಿಸಲಾಗಿದೆ. ಹೆಬ್ರಿ ಮೂಲದ ರಾಘವೇಂದ್ರ ದೇವಾಡಿಗ ಮತ್ತು ಪ್ರಮೀಳ ದೇವಾಡಿಗರ ಪುತ್ರಿ ರಂಜಿತಾ ಕುಮಾರಿಗೆ ನೀಡಿದ್ದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಮತ್ತು ನಗದು ಬಹುಮಾನ ಹತ್ತು ಸಾವಿರ ರೂ. ಓಳಗೊಂಡಿದೆ ಎಂದರು.
ಸಂಸ್ಥೆಯ ಯುವ ಸೇವಾ ಯೋಜನೆಯ ನಿರ್ದೇಶಕ ಪ್ರಶಾಂತ್ ರೈ, ವಾಣಿ ರಾಜೆಂದ್ರ ಕಲ್ಬಾವಿ, ರಾಜಶ್ರೀ, ಶೈಲಶ್ರೀ, ಉಪಸ್ಥಿತರಿದ್ದರು. ರೋಟರಿ ಸಂಸ್ಥೆಯ ಅಧ್ಯಕ್ಷ ಕ್ಯಾನುಟ್ ಪಿಂಟೊ ಸ್ವಾಗತಿಸಿದರು. ಸಂಸ್ಥೆಯ ಸ್ಥಾಪನಾ ಅಧ್ಯಕ್ಷ ಡಾ. ರಂಜನ್ ಪ್ರಶಸ್ತಿ ಪುರಸ್ಕೃತರ ವಿವರ ನೀಡಿದರು.
ಈ ಸಂದರ್ಭದಲ್ಲಿ ನೂತನ ಸದಸ್ಯರಾಗಿ ಸನ್ನಿತ್ ಶೇಟ್ ಅವರನ್ನು ಸಂಸ್ಥೆಗೆ ಸೇರ್ಪಡಿಸಲಾಯಿತು. ಕಾರ್ಯದರ್ಶಿ ಬಸವಕುಮಾರ್ ವಂದಿಸಿದರು.