News Karnataka Kannada
Friday, April 26 2024
ಮಂಗಳೂರು

ಸ್ಟ್ರಿಂಗ್  ಕಲೆಯ ಸಾಧಕಿ ರಂಜಿತಾಗೆ ಅನಂತಮಿತ್ರ ಕಲ್ಬಾವಿ ಪ್ರಶಸ್ತಿ ಪ್ರದಾನ

Ranjitha
Photo Credit : News Kannada

ಮಂಗಳೂರು: ಕಲ್ಬಾವಿ ಪ್ರತಿಷ್ಠಾನ ಮತ್ತು ರೋಟರಿ ಮಂಗಳೂರು ಸಿಟಿ ಆಶ್ರಯದಲ್ಲಿ ಪ್ರಥಮ ವಾರ್ಷಿಕ ಅನಂತಮಿತ್ರ ಕಲ್ಬಾವಿ ಪ್ರಶಸ್ತಿ 2022ಯನ್ನು ಯುವ ಸಾಧಕಿ ರಂಜಿತ ದೇವಾಡಿಗ ಅವರಿಗೆ ಸ್ಟ್ರಿಂಗ್ ಕಲೆಯಲ್ಲಿ ಸಾಧಿಸಿದ ಸಾಧನೆಯನನ್ನು ಪರಿಗಣಿಸಿ ನಗರ ಹೋಟೆಲ್ ಉತ್ಸವ್ ಸಭಾಂಗಣದಲ್ಲಿ ಶನಿವಾರ ಪ್ರದಾನ ಮಾಡಲಾಯಿತು.

ರೋಟರಿ ಸಂಸ್ಥೆಯ ಸಲಹೆಗಾರ ಹಾಗೂ ಪ್ರಶಸ್ತಿಯ ಮುಖ್ಯ ಪ್ರಾಯೋಜಕ ರಾಜೇಂದ್ರ ಕಲ್ಬಾವಿ ಭಾಗವಹಿಸಿ, ತಮ್ಮ ಪೋಷಕರಾದ ದಿ. ಕಲ್ಬಾವಿ ಅನಂತ ಪದ್ಮನಾಭ ರಾವ್ ಹಾಗೂ ದಿ. ಸುಮಿತ್ರ ರಾವ್ ಸ್ಮರಣಾರ್ಥ ಪ್ರಾಯೋಜಿಸಲಾಗಿದೆ. ಹೆಬ್ರಿ ಮೂಲದ ರಾಘವೇಂದ್ರ ದೇವಾಡಿಗ ಮತ್ತು ಪ್ರಮೀಳ ದೇವಾಡಿಗರ ಪುತ್ರಿ ರಂಜಿತಾ ಕುಮಾರಿಗೆ ನೀಡಿದ್ದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಮತ್ತು ನಗದು ಬಹುಮಾನ ಹತ್ತು ಸಾವಿರ ರೂ. ಓಳಗೊಂಡಿದೆ ಎಂದರು.

ಸಂಸ್ಥೆಯ ಯುವ ಸೇವಾ ಯೋಜನೆಯ ನಿರ್ದೇಶಕ ಪ್ರಶಾಂತ್ ರೈ, ವಾಣಿ ರಾಜೆಂದ್ರ ಕಲ್ಬಾವಿ, ರಾಜಶ್ರೀ, ಶೈಲಶ್ರೀ, ಉಪಸ್ಥಿತರಿದ್ದರು. ರೋಟರಿ ಸಂಸ್ಥೆಯ ಅಧ್ಯಕ್ಷ ಕ್ಯಾನುಟ್ ಪಿಂಟೊ ಸ್ವಾಗತಿಸಿದರು. ಸಂಸ್ಥೆಯ ಸ್ಥಾಪನಾ ಅಧ್ಯಕ್ಷ ಡಾ. ರಂಜನ್ ಪ್ರಶಸ್ತಿ ಪುರಸ್ಕೃತರ ವಿವರ ನೀಡಿದರು.

ಈ ಸಂದರ್ಭದಲ್ಲಿ ನೂತನ ಸದಸ್ಯರಾಗಿ ಸನ್ನಿತ್ ಶೇಟ್ ಅವರನ್ನು ಸಂಸ್ಥೆಗೆ ಸೇರ್ಪಡಿಸಲಾಯಿತು. ಕಾರ್ಯದರ್ಶಿ ಬಸವಕುಮಾರ್ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು