News Kannada
Saturday, April 01 2023

ಮಂಗಳೂರು

ಆಗ ನಕಲಿ ಅಂಕಪಟ್ಟಿ ಇಂದು ನಕಲಿ ಕೋವಿಡ್ ಸರ್ಟಿಫಿಕೇಟ್

coivd 19
Photo Credit :
ಮಂಗಳೂರು : ನಕಲಿ ಅಂಕಪಟ್ಟಿಯ ರೀತಿ ಕೇರಳ ಗಡಿ ಭಾಗದಲ್ಲಿ ನಕಲಿ ಸರ್ಟಿಫಿಕೇಟ್  ಜಾಲವು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ  .
ಮಂಗಳೂರು  ನಗರಕ್ಕೆ ಹೊಂದಿಕೊಂಡಿರುವ ತಲಪಾಡಿ ಗಡಿ ಭಾಗದಲ್ಲಿ ಎರಡು  ದಿನಗಳ ಅಂತರದಲ್ಲಿಯೇ ನಾಲ್ವರು ಯುವತಿಯರು ಸೇರಿ ಒಟ್ಟು ಹನ್ನೊಂದು ಮಂದಿ ನಕಲಿ ಆರ್ ಟಿಪಿಸಿಆರ್ ಸರ್ಟಿಫಿಕೇಟ್ ಇಟ್ಟು ಕೊಂಡು ಕರ್ನಾಟಕಕ್ಕೆ ಬಂದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.ಪ್ರಕರಣ ಸಂಬಂಧಿಸಿ 7 ಮಂದಿಯನ್ನು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ .
ಮಂಗಳೂರಿನಲ್ಲಿ ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದ ಇಬ್ಬರು ಯುವತಿಯರು ಮತ್ತು ಒಬ್ಬ ಎಂಬಿಎ ವಿದ್ಯಾರ್ಥಿ ನಕಲಿ ಸರ್ಟಿಫಿಕೇಟ್ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ ಹಾಗೂ ಯುವತಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು ವಿಚಾರಣೆ ನಡೆಸಿ ಮನೆಗೆ ಕಳುಹಿಸಿದ್ದಾರೆ.
ಮಂಗಳೂರಿನಲ್ಲಿ ಎಂಬಿಎ ವಿದ್ಯಾರ್ಥಿ ಯಾಗಿರುವ ಕಾಸರಗೋಡು ಜಿಲ್ಲೆಯ ಆಲಂಪಾಡಿ ನಿವಾಸಿ ಅಬ್ದುಲ್ ತಮೀಮ್, ಚೆರ್ವತ್ತೂರು ನಿವಾಸಿ ಹಾಸಿಮ್,  ಆದಿಲ್, ಕಾಸರಗೋಡು ಕಡಪ್ಪುರ ನಿವಾಸಿ ಇಸ್ಮಾಯಿಲ್ ಮತ್ತು ಇವರಿಗೆ ನಕಲಿ ಪ್ರಮಾಣಪತ್ರ ಒದಗಿಸಿದ್ದ ಚೆರ್ವತ್ತೂರು  ನಿವಾಸಿ ಕಬೀರ್ ಎಂಬವರನ್ನು ತಲಪಾಡಿ ಗಡಿಯಲ್ಲಿ  ಬಂಧಿಸಲಾಗಿತ್ತು . ಮತ್ತೆ ತಲಪಾಡಿ ಗಡಿಯಲ್ಲಿ ಮಂಗಳೂರಿನ ಪಡೀಲ್ ನಿವಾಸಿ ಮಹಮ್ಮದ್ ಶರೀಫ್ ಮತ್ತು ಮಂಜೇಶ್ವರ ನಿವಾಸಿ ಅಬೂಬಕರ್ ನಕಲಿ ಸರ್ಟಿಫಿಕೇಟ್ ತೋರಿಸಿ ಸಿಕ್ಕಿಬಿದ್ದಿದ್ದಾರೆ .ಪಡೀಲ್ ನಿವಾಸಿ ಮಂಜೇಶ್ವರದ ಸಂಬಂಧಿಕರ ಮನೆಗೆ ತೆರಳಿದ್ದು ಹಿಂತಿರುಗಿ ಬರುವಾಗ ಕೋವಿಡ್ ನೆಗಟೀವ್ ಸರ್ಟಿಫಿಕೇಟ್ ತೋರಿಸಿದ್ದ  ಆದರೆ ಅದು ನಕಲಿಯಾಗಿತ್ತು ಸೌದಿಯಲ್ಲಿ ಉದ್ಯೋಗಿಯಾಗಿರುವ ಅಬೂಬಕರ್ ತನ್ನ ಗೆಳೆಯರನ್ನು ಕಾಣುವ ಸಲುವಾಗಿ ಮಂಗಳೂರಿಗೆ ಬಂದಿದ್ದು ಈ ವೇಳೆ ನಕಲಿ ಸರ್ಟಿಫಿಕೇಟ್ ತೂರಿಸಿದ್ದ ಇವರಿಗೆ ನಕಲಿ ಸರ್ಟಿಫಿಕೇಟ್ ಮಾಡಿಕೊಟ್ಟಿದ್ದು ಯಾರು ಮತ್ತು ಎಲ್ಲಿ  ಎನ್ನುವುದನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ .
ಕಾಸರಗೋಡಿನ ಇತರ ಆರೋಪಿಗಳು ಚೆರ್ವತ್ತೂರಿನ ಕಬೀರ್ ಬಳಿಯಲ್ಲಿ ನಕಲಿ ಸರ್ಟಿಫಿಕೇಟ್ ಪಡೆದರು ಎನ್ನುವುದನ್ನು ತನಿಖೆಯಲ್ಲಿ ಬಯಲಾಗಿದೆ ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಕಾಸರಗೋಡಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಕಾಸರಗೋಡಿನಿಂದ ಮಂಗಳೂರಿಗೆ ಬರಲು ಬಳಸಿದ್ದ ಇನ್ನೋವಾ ಮತ್ತು ಇಟಿಯೋಸ್ ಕಾರು 2ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ ಉಪ್ಪಳ ಮೂಲದ ಇಬ್ಬರು ವಿದ್ಯಾರ್ಥಿನಿಯರು ವಿಚಾರಣೆ ಸಂದರ್ಭ ತಮಗೆ ಬೇರೆ ಗೆಳೆಯರು ಸರ್ಟಿಫಿಕೇಟ್ ಮಾಡಿಕೊಟ್ಟಿದ್ದರು ನಾವು ಪರೀಕ್ಷೆಗೆ ತೆರಳಿದ್ದೆವು ಎಂದು ಹೇಳಿದ್ದರೂ  ನಕಲಿಯಾಗಿ ಮಾಡಲಾಗಿತ್ತು ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
See also  ದಕ್ಷಿಣ ಕನ್ನಡ : ಸೆ.7  ಕೋವಿಡ್ ಲಸಿಕಾ ಶಿಬಿರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು